ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಆರ್ಥಿಕ ಸಮೀಕ್ಷೆ ವರದಿ: ತಲಾ ಆದಾಯದಲ್ಲಿ ಸಿದ್ದಾಪುರವೇ ಮೊದಲು

ರಾಜ್ಯದ ಸರಾಸರಿಗಿಂತ ಶೇ 1.10ರಷ್ಟು ಹೆಚ್ಚು
Published : 21 ಜೂನ್ 2025, 6:40 IST
Last Updated : 21 ಜೂನ್ 2025, 6:40 IST
ಫಾಲೋ ಮಾಡಿ
Comments
‘ಎರಡು ವರ್ಷಕ್ಕೊಮ್ಮೆ ಸಮೀಕ್ಷೆ’
‘ಪ್ರತಿ ಎರಡು ವರ್ಷಕ್ಕೊಮ್ಮೆ ಜಿಲ್ಲಾವಾರಿ ಆರ್ಥಿಕ ಚಟುವಟಿಕೆಗಳ ಮಾಹಿತಿ ಆಧರಿಸಿ ತಾಲ್ಲೂಕುವಾರು ಸರಾಸರಿ ನಿರ್ಧರಿಸಲಾಗುತ್ತದೆ. ಉತ್ತರ ಕನ್ನಡದಲ್ಲಿನ ಆರ್ಥಿಕ ಚಟುವಟಿಕೆಗಳು ವಿಸ್ತರಣೆಯಾಗಿವೆ. ಅಲ್ಲಿನ ತಾಲ್ಲೂಕುವಾರು ತಲಾ ಆದಾಯದಲ್ಲೂ ವ್ಯತ್ಯಾಸಗಳಾಗಿರಬಹುದು. ಆದರೆ, ತಾಲ್ಲೂಕುವಾರು ವರದಿ ಇನ್ನಷ್ಟೆ ಸಿದ್ಧವಾಗಬೇಕಿದೆ’ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ನರಸಿಂಹ ಫಣಿ ತಿಳಿಸಿದರು.
ತಲಾ ಆದಾಯ ಮಾಹಿತಿ ಪರಿಗಣನೆಗೆ 21 ವಲಯಗಳ ಒಟ್ಟಾರೆ ವಹಿವಾಟು ಲೆಕ್ಕಾಚಾರ ಹಾಕಲಾಗುತ್ತಿದ್ದರೂ ಉತ್ತರ ಕನ್ನಡದ ತಲಾ ಆದಾಯ ನಿರ್ಧರಿಸಲು ಕೃಷಿ, ಸೇವಾ ವಲಯ ಮತ್ತು ಮೀನುಗಾರಿಕೆ ಕ್ಷೇತ್ರದ ಆದಾಯವೇ ಪ್ರಧಾನ ಅಂಶವಾಗುತ್ತಿದೆ.
– ನರಸಿಂಹ ಫಣಿ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ
ಜಿಲ್ಲೆಯಲ್ಲಿ ದೊಡ್ಡಮಟ್ಟದ ಕೈಗಾರಿಕೆಗಳಿಲ್ಲದಿರುವುದು, ಸೇವಾ ವಲಯಗಳ ವಹಿವಾಟು ಹೆಚ್ಚಿಲ್ಲದಿರುವುದು ತಲಾ ಆದಾಯ ಪ್ರಮಾಣ ಇನ್ನೂ ಏರಿಕೆಯಾಗದಿರಲು ಪ್ರಮುಖ ಕಾರಣವಾಗಿರಬಹುದು .
– ಜಗದೀಶ ಬಿರ್ಕೋಡಿಕರ್, ಆರ್ಥಿಕ ವಿಶ್ಲೇಷಕ
ಆದಾಯ ಗಳಿಕೆ ಕುಸಿತವೇಕೆ?
‘ಜಿಲ್ಲೆಯ ಒಟ್ಟಾರೆ ಭೂಭಾಗದ ಶೇ 79.03 ರಷ್ಟು ಅರಣ್ಯವೇ ಇದೆ. 1.67 ಲಕ್ಷ ಹೆಕ್ಟೇರ್ ಪ್ರದೇಶ ಮಾತ್ರ ಕೃಷಿಗೆ ಬಳಕೆ ಆಗುತ್ತಿದೆ. ಸಣ್ಣ ಕೈಗಾರಿಕೆಗಳ ಪ್ರಮಾಣವೂ ಜಿಲ್ಲೆಯಲ್ಲಿ ಕಡಿಮೆ ಇದ್ದು, ಅವುಗಳ ವಹಿವಾಟು ಪ್ರಮಾಣವೂ ಕಡಿಮೆ ಇದೆ. ಮಹಾನಗರಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವಹಿವಾಟು ಕಡಿಮೆ ಇದೆ. ಇವೆಲ್ಲ ಕಾರಣಗಳು ಆದಾಯ ಗಳಿಕೆ ಕಡಿಮೆಯಾಗಲು ಕಾರಣ’ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕ ಜಗದೀಶ ಬಿರ್ಕೋಡಿಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT