ಸುಮಾರು ಒಂದೂವರೆ ತಿಂಗಳ ಹಿಂದೆ ಹೊನ್ನಾವರದ ಕರ್ಕಿಯಿಂದ ಬಂದಿದ್ದ ಹನುಮಂತ ದೇವರ ಪಲ್ಲಕ್ಕಿ ಕುಮಟಾದ ಹೆಗಡೆ, ಮಾಸೂರಿನಲ್ಲಿ ವಾಸ್ತವ್ಯ ಹೂಡಿತ್ತು. ಅಲ್ಲಿಂದ ಪಟ್ಟಣದ ಶಾಂತಿಕಾ ಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ಸುಮಾರು ಹದಿನೈದು ದಿನ ವಾಸ್ತವ್ಯ ಹೂಡಿತ್ತು. ಬುಧವಾರ ಕುಮಟಾದಿಂದ ಚಂದಾವರದ ಮೂಲ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಪಲ್ಲಕಿ ತೆರಳುವಾಗ ಸಾವಿರಾರು ಭಕ್ತರು ಪಾಲ್ಗೊಂಡು ಬೀಳ್ಕೊಟ್ಟರು.