<p><strong>ಹೊನ್ನಾವರ</strong>: ತಾಲ್ಲೂಕಿನ ಕಲಾವಿದ ಜಿ.ಡಿ.ಭಟ್ಟ ಕೆಕ್ಕಾರ ಅವರು ಗಣೇಶ ಚತುರ್ಥಿಗೆಂದು ಪ್ರತಿ ವರ್ಷ ತಯಾರಿಸುವ ಗಣಪತಿ ಮೂರ್ತಿಯಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅವರು ತಯಾರಿಸಿದ ವಿಗ್ರಹಗಳನ್ನು ನೋಡಲು ಕಲಾಪ್ರೇಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.</p>.<p>ಈ ಮೂರ್ತಿಗಳ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲೂ ತಾ ಮುಂದು ನಾ ಮುಂದು ಎಂದು ಪೈಪೋಟಿಯೂ ಆಗುತ್ತದೆ.</p>.<p>ಈ ವರ್ಷವೂ ಅವರು ತಯಾರಿಸಿರುವ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗಣಪನ ವಿಗ್ರಹದ ಕುರಿತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಗಣಪತಿಯ ದೋತಿ ಮತ್ತು ಶಲ್ಯವು ಅತ್ಯಂತ ಸಹಜವಾಗಿ ಆಕರ್ಷಕವಾಗಿ ಕಾಣುತ್ತಿದೆ. ಅವುಗಳನ್ನು ಮಣ್ಣಿನಿಂದಲೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಜಿ.ಡಿ.ಭಟ್ಟ ಅವರೇ ಸ್ವಲ್ಪ ಸ್ಪಷ್ಟನೆ ನೀಡಿದ್ದಾರೆ.</p>.<p>‘ಈ ವರ್ಷ ವಿವಿಧ ಗಾತ್ರಗಳ 120 ಗಣಪತಿ ವಿಗ್ರಹಗಳನ್ನು ತಯಾರಿಸಿದ್ದೇವೆ. ಚೌತಿಯ ಸಂದರ್ಭದಲ್ಲಿ ಸಹಜವಾಗಿಯೇ ಧಾವಂತವಿರುತ್ತದೆ. ನನ್ನ ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ಪೂರ್ತಿಗೊಳ್ಳಲು ಕೆಲವೊಂದು ಕೆಲಸಗಳು ಬಾಕಿ ಇದ್ದವು. ಈ ನಡುವೆ ಸ್ವಲ್ಪ ಅನಾರೋಗ್ಯ ಕೂಡ ಕಾಡಿತು. ಹಾಗಾಗಿ ಸಮಯದ ಅಭಾವದಿಂದ ಶಲ್ಯ ಮತ್ತು ದೋತಿಯನ್ನು ಮಣ್ಣಿನಿಂದ ಮಾಡುವ ಬದಲು, ಅಂಥ ಬಟ್ಟೆಯನ್ನೇ ತಂದು ಜೋಡಿಸಲಾಯಿತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಕಳೆದ ವರ್ಷ ಅವರು ಯಕ್ಷಗಾನ ವೇಷಧಾರಿಯಂತಿರುವ ಗಣಪತಿ ವಿಗ್ರಹ ತಯಾರಿಸಿದ್ದರು. ವಿಗ್ರಹದ ಮೇಲಿನ ವೇಷ– ಭೂಷಣಗಳನ್ನೂ ಮಣ್ಣಿನಲ್ಲೇ ಅತ್ಯಂತ ಸಹಜವಾಗಿ ರೂಪಿಸಿದ್ದರು. ಇದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.</p>.<p>ಅವರು ಈ ಬಾರಿಯೂ ತಯಾರಿಸಿರುವ ಗಣಪತಿ ವಿಗ್ರಹಗಳು ಅತ್ಯಂತ ಆಕರ್ಷಕವಾಗಿವೆ. ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲು ನೀಡಿರುವ ಮೂರ್ತಿಗಳಲ್ಲೂ ದೋತಿಯನ್ನು ನೈಜ ಎಂಬಂತೆ ಮಣ್ಣಿನಲ್ಲೇ ಮೂಡಿಸಿದ್ದಾರೆ. ಅವು ಆರಾಧಕರನ್ನು ಆಕರ್ಷಿಸುತ್ತಿದ್ದು, ಜಿ.ಡಿ.ಭಟ್ಟರ ಕಲಾ ನೈಪುಣ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.</p>.<p class="Subhead"><strong>ಬಹುಮುಖ ಪ್ರತಿಭೆ:</strong>ಜಿ.ಡಿ.ಭಟ್ಟ ಕೆಕ್ಕಾರ ಅವರು ಬಹುಮುಖ ಪ್ರತಿಭೆಯ ಕಲಾವಿದರು. ನಾಟಕ ಕಲಾವಿದರಾಗಿ, ನಿರ್ದೇಶಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಅವರು ಮಣ್ಣಿನಿಂದ ತಯಾರಿಸುವ ವಿವಿಧ ಕಲಾಕೃತಿಗಳಿಗೆ ಬಲು ಬೇಡಿಕೆ ಇದೆ. ರೈತರ ಬೆಳೆಗೆ ಕಾಟ ಕೊಡುವ ಕೋತಿಯನ್ನೂ ಅವರು ಚಾಣಾಕ್ಷತನದಿಂದ ಪಂಜರದಲ್ಲಿ ಹಿಡಿದಿಡಬಲ್ಲರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ</strong>: ತಾಲ್ಲೂಕಿನ ಕಲಾವಿದ ಜಿ.ಡಿ.ಭಟ್ಟ ಕೆಕ್ಕಾರ ಅವರು ಗಣೇಶ ಚತುರ್ಥಿಗೆಂದು ಪ್ರತಿ ವರ್ಷ ತಯಾರಿಸುವ ಗಣಪತಿ ಮೂರ್ತಿಯಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅವರು ತಯಾರಿಸಿದ ವಿಗ್ರಹಗಳನ್ನು ನೋಡಲು ಕಲಾಪ್ರೇಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.</p>.<p>ಈ ಮೂರ್ತಿಗಳ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲೂ ತಾ ಮುಂದು ನಾ ಮುಂದು ಎಂದು ಪೈಪೋಟಿಯೂ ಆಗುತ್ತದೆ.</p>.<p>ಈ ವರ್ಷವೂ ಅವರು ತಯಾರಿಸಿರುವ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗಣಪನ ವಿಗ್ರಹದ ಕುರಿತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಗಣಪತಿಯ ದೋತಿ ಮತ್ತು ಶಲ್ಯವು ಅತ್ಯಂತ ಸಹಜವಾಗಿ ಆಕರ್ಷಕವಾಗಿ ಕಾಣುತ್ತಿದೆ. ಅವುಗಳನ್ನು ಮಣ್ಣಿನಿಂದಲೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಜಿ.ಡಿ.ಭಟ್ಟ ಅವರೇ ಸ್ವಲ್ಪ ಸ್ಪಷ್ಟನೆ ನೀಡಿದ್ದಾರೆ.</p>.<p>‘ಈ ವರ್ಷ ವಿವಿಧ ಗಾತ್ರಗಳ 120 ಗಣಪತಿ ವಿಗ್ರಹಗಳನ್ನು ತಯಾರಿಸಿದ್ದೇವೆ. ಚೌತಿಯ ಸಂದರ್ಭದಲ್ಲಿ ಸಹಜವಾಗಿಯೇ ಧಾವಂತವಿರುತ್ತದೆ. ನನ್ನ ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ಪೂರ್ತಿಗೊಳ್ಳಲು ಕೆಲವೊಂದು ಕೆಲಸಗಳು ಬಾಕಿ ಇದ್ದವು. ಈ ನಡುವೆ ಸ್ವಲ್ಪ ಅನಾರೋಗ್ಯ ಕೂಡ ಕಾಡಿತು. ಹಾಗಾಗಿ ಸಮಯದ ಅಭಾವದಿಂದ ಶಲ್ಯ ಮತ್ತು ದೋತಿಯನ್ನು ಮಣ್ಣಿನಿಂದ ಮಾಡುವ ಬದಲು, ಅಂಥ ಬಟ್ಟೆಯನ್ನೇ ತಂದು ಜೋಡಿಸಲಾಯಿತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಕಳೆದ ವರ್ಷ ಅವರು ಯಕ್ಷಗಾನ ವೇಷಧಾರಿಯಂತಿರುವ ಗಣಪತಿ ವಿಗ್ರಹ ತಯಾರಿಸಿದ್ದರು. ವಿಗ್ರಹದ ಮೇಲಿನ ವೇಷ– ಭೂಷಣಗಳನ್ನೂ ಮಣ್ಣಿನಲ್ಲೇ ಅತ್ಯಂತ ಸಹಜವಾಗಿ ರೂಪಿಸಿದ್ದರು. ಇದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.</p>.<p>ಅವರು ಈ ಬಾರಿಯೂ ತಯಾರಿಸಿರುವ ಗಣಪತಿ ವಿಗ್ರಹಗಳು ಅತ್ಯಂತ ಆಕರ್ಷಕವಾಗಿವೆ. ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲು ನೀಡಿರುವ ಮೂರ್ತಿಗಳಲ್ಲೂ ದೋತಿಯನ್ನು ನೈಜ ಎಂಬಂತೆ ಮಣ್ಣಿನಲ್ಲೇ ಮೂಡಿಸಿದ್ದಾರೆ. ಅವು ಆರಾಧಕರನ್ನು ಆಕರ್ಷಿಸುತ್ತಿದ್ದು, ಜಿ.ಡಿ.ಭಟ್ಟರ ಕಲಾ ನೈಪುಣ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.</p>.<p class="Subhead"><strong>ಬಹುಮುಖ ಪ್ರತಿಭೆ:</strong>ಜಿ.ಡಿ.ಭಟ್ಟ ಕೆಕ್ಕಾರ ಅವರು ಬಹುಮುಖ ಪ್ರತಿಭೆಯ ಕಲಾವಿದರು. ನಾಟಕ ಕಲಾವಿದರಾಗಿ, ನಿರ್ದೇಶಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಅವರು ಮಣ್ಣಿನಿಂದ ತಯಾರಿಸುವ ವಿವಿಧ ಕಲಾಕೃತಿಗಳಿಗೆ ಬಲು ಬೇಡಿಕೆ ಇದೆ. ರೈತರ ಬೆಳೆಗೆ ಕಾಟ ಕೊಡುವ ಕೋತಿಯನ್ನೂ ಅವರು ಚಾಣಾಕ್ಷತನದಿಂದ ಪಂಜರದಲ್ಲಿ ಹಿಡಿದಿಡಬಲ್ಲರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>