<p><strong>ಶಿರಸಿ</strong>: ವಿದ್ಯುತ್ ಗ್ರಿಡ್ ಸ್ಥಾಪನೆಗೆ ಸಂಬಂಧಿಸಿ 110 ಕೆವಿಯಿಂದ 132 ಕೆವಿಗೆ ಹೆಚ್ಚಿಸುವ ‘ಸಾಮರ್ಥ್ಯ ನವೀಕರಣ’ ನಿಯಮವು ಈಗಾಗಲೇ ಅನುಮೋದನೆಗೊಂಡಿದ್ದ ಗ್ರಿಡ್ಗಳ ಅನುಷ್ಠಾನಕ್ಕೆ ತಡೆಯಾಗಿದೆ. ಇದು ನಿರಂತರ ಹಾಗೂ ಸಮರ್ಪಕ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕರ ನಿರಾಸೆಗೆ ಕಾರಣವಾಗಿದೆ. </p>.<p>ಉತ್ತರ ಕನ್ನಡ ಜಿಲ್ಲೆಯಲ್ಲಿ 5.5 ಲಕ್ಷ ವಿದ್ಯುತ್ ಗ್ರಾಹಕರಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಸರಾಸರಿ 130.42 ಚ.ಕಿ.ಮೀ.ಗೆ ಒಂದು ವಿದ್ಯುತ್ ಗ್ರಿಡ್ ಇರಬೇಕೆಂದಿದ್ದರೂ ಉತ್ತರ ಕನ್ನಡದಲ್ಲಿ ಆ ಪ್ರಮಾಣ 302 ಚ.ಕಿ.ಮೀ.ಗೆ ಒಂದು ಗ್ರಿಡ್ ಇದೆ. ಇದಲ್ಲದೇ 300 ಚ.ಕಿ.ಮೀ. ಮೀರಿದ 2 ಮಾರ್ಗಗಳಿವೆ.</p>.<p>ವಾರ್ಷಿಕವಾಗಿ ಈ ಮಾರ್ಗಗಳಲ್ಲಿ ಸರಾಸರಿ 2,862 ಬಾರಿ ವಿದ್ಯುತ್ ಅಡಚಣೆ ಆಗುತ್ತಿದೆ. ಈ ಎಲ್ಲ ಕಾರಣಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಹೆಸ್ಕಾಂಗೆ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 110 ಕೆವಿ ಸಾಮರ್ಥ್ಯದ ಹೊಸ ಗ್ರಿಡ್ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು.</p>.<p>ಬನವಾಸಿ ಹಾಗೂ ಭಟ್ಕಳ ಗ್ರಿಡ್ ಹೊರತುಪಡಿಸಿ ಬಹುತೇಕ ಕಡೆ ತಾಂತ್ರಿಕ ಸಮಸ್ಯೆಯಿಂದ ಅನುಷ್ಠಾನ ವಿಳಂಬವಾಗಿತ್ತು. ಇದೀಗ ಈ ವಿಳಂಬಕ್ಕೆ ಬೆಲೆ ತೆರಬೇಕಾದ ಸ್ಥಿತಿ ಎದುರಾಗಿದ್ದು, ಹಾಲಿ ಮಂಜೂರಾದ ಗ್ರಿಡ್ಗಳ ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಇವುಗಳ ಸಾಮರ್ಥ್ಯ ಹೆಚ್ಚಿಸಿ ಕಾಮಗಾರಿ ನಡೆಸಲು ಮತ್ತೆ ಅನುಮೋದನೆ ಪಡೆಯಬೇಕಿದೆ. </p>.<div><blockquote>ಸಾಮರ್ಥ್ಯ ನವೀಕರಣ ಪ್ರಕ್ರಿಯೆ ತಕ್ಷಣ ಆದರೆ ತ್ವರಿತವಾಗಿ ಗ್ರಿಡ್ ಸ್ಥಾಪನೆ ಆಗಲಿದೆ. ಅದರ ಹೊರತಾಗಿ ಬೇರಾವುದೇ ತೊಂದರೆಯಿಲ್ಲ </blockquote><span class="attribution">ಸುನೀಲ್ ಕುಮಾರ, ಕೆಪಿಟಿಸಿಎಲ್ ಎಂಜಿನಿಯರ್, ಶಿರಸಿ</span></div>.<p>‘ಕೇಂದ್ರ ಸರ್ಕಾರವು 110 ಕೆವಿ ಸಾಮರ್ಥ್ಯದ ಬದಲು 132 ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪನೆ ಮಾಡಬೇಕು. ಅದಕ್ಕೆ ಈ ಹಿಂದೆ ಸಲ್ಲಿಸಿದ್ದ ಯೋಜನೆ ನೀಲನಕ್ಷೆ ಬದಲಿಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಆದೇಶಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಮಂಜೂರಾಗಿದ್ದ ಐದಕ್ಕೂ ಹೆಚ್ಚು ಗ್ರಿಡ್ಗಳ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ’ ಎಂಬುದು ಕೆಪಿಟಿಸಿಎಲ್ ಅಧಿಕಾರಿಗಳ ಮಾಹಿತಿ. </p>.<p>‘ಹೆಸ್ಕಾಂ ಶಿರಸಿ ವೃತ್ತದ ಕಚೇರಿಯಿಂದ 2010 ರಿಂದ ಈವರೆಗೆ 33 ವಿದ್ಯುತ್ ಗ್ರಿಡ್ ಸ್ಥಾಪನೆಗೆ ಮಂಜೂರು ನೀಡುವಂತೆ ವಿದ್ಯುತ್ ಪ್ರಸರಣ ನಿಗಮಕ್ಕೆ ₹590 ಕೋಟಿ ಯೋಜನೆಯ ಪ್ರಸ್ತಾವ ಕಳುಹಿಸಲಾಗಿದೆ. ಅದರಲ್ಲಿ ಜಾಗದ ಕೊರತೆಯ ಕಾರಣಕ್ಕೆ ಹಲವು ಗ್ರಿಡ್ಗಳಿಗೆ ಮಂಜೂರಾತಿ ಸಿಕ್ಕಿರಲಿಲ್ಲ. ಆದರೆ ಜಾಗದ ಸಮಸ್ಯೆಯಿಲ್ಲದ ಹತ್ತರಗಿ, ಕಾನಸೂರು, ಸಾಮ್ರಾಣಿ, ತೇರಗಾಂವ, ಮಾದನಗೇರಿ ಗ್ರಿಡ್ಗಳಿಗೆ ಮಂಜೂರಾತಿ ದೊರೆತಿತ್ತು’ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.</p>.<p>‘ವಿವಿಧ ಕಾರಣಕ್ಕೆ ಇವುಗಳ ಕಾಮಗಾರಿ ನಡೆದಿರಲಿಲ್ಲ. ಆದರೆ ಈಗ ಈ ಎಲ್ಲ ಗ್ರಿಡ್ಗಳ ನೀಲನಕ್ಷೆಯನ್ನು 132 ಕೆವಿ ಸಾಮರ್ಥ್ಯದ ಗ್ರಿಡ್ ಗೆ ನವೀಕರಿಸಿ ಅನುಮೋದನೆ ಪಡೆಯಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಇವುಗಳ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ವಿದ್ಯುತ್ ಗ್ರಿಡ್ ಸ್ಥಾಪನೆಗೆ ಸಂಬಂಧಿಸಿ 110 ಕೆವಿಯಿಂದ 132 ಕೆವಿಗೆ ಹೆಚ್ಚಿಸುವ ‘ಸಾಮರ್ಥ್ಯ ನವೀಕರಣ’ ನಿಯಮವು ಈಗಾಗಲೇ ಅನುಮೋದನೆಗೊಂಡಿದ್ದ ಗ್ರಿಡ್ಗಳ ಅನುಷ್ಠಾನಕ್ಕೆ ತಡೆಯಾಗಿದೆ. ಇದು ನಿರಂತರ ಹಾಗೂ ಸಮರ್ಪಕ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕರ ನಿರಾಸೆಗೆ ಕಾರಣವಾಗಿದೆ. </p>.<p>ಉತ್ತರ ಕನ್ನಡ ಜಿಲ್ಲೆಯಲ್ಲಿ 5.5 ಲಕ್ಷ ವಿದ್ಯುತ್ ಗ್ರಾಹಕರಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಸರಾಸರಿ 130.42 ಚ.ಕಿ.ಮೀ.ಗೆ ಒಂದು ವಿದ್ಯುತ್ ಗ್ರಿಡ್ ಇರಬೇಕೆಂದಿದ್ದರೂ ಉತ್ತರ ಕನ್ನಡದಲ್ಲಿ ಆ ಪ್ರಮಾಣ 302 ಚ.ಕಿ.ಮೀ.ಗೆ ಒಂದು ಗ್ರಿಡ್ ಇದೆ. ಇದಲ್ಲದೇ 300 ಚ.ಕಿ.ಮೀ. ಮೀರಿದ 2 ಮಾರ್ಗಗಳಿವೆ.</p>.<p>ವಾರ್ಷಿಕವಾಗಿ ಈ ಮಾರ್ಗಗಳಲ್ಲಿ ಸರಾಸರಿ 2,862 ಬಾರಿ ವಿದ್ಯುತ್ ಅಡಚಣೆ ಆಗುತ್ತಿದೆ. ಈ ಎಲ್ಲ ಕಾರಣಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಹೆಸ್ಕಾಂಗೆ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 110 ಕೆವಿ ಸಾಮರ್ಥ್ಯದ ಹೊಸ ಗ್ರಿಡ್ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು.</p>.<p>ಬನವಾಸಿ ಹಾಗೂ ಭಟ್ಕಳ ಗ್ರಿಡ್ ಹೊರತುಪಡಿಸಿ ಬಹುತೇಕ ಕಡೆ ತಾಂತ್ರಿಕ ಸಮಸ್ಯೆಯಿಂದ ಅನುಷ್ಠಾನ ವಿಳಂಬವಾಗಿತ್ತು. ಇದೀಗ ಈ ವಿಳಂಬಕ್ಕೆ ಬೆಲೆ ತೆರಬೇಕಾದ ಸ್ಥಿತಿ ಎದುರಾಗಿದ್ದು, ಹಾಲಿ ಮಂಜೂರಾದ ಗ್ರಿಡ್ಗಳ ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಇವುಗಳ ಸಾಮರ್ಥ್ಯ ಹೆಚ್ಚಿಸಿ ಕಾಮಗಾರಿ ನಡೆಸಲು ಮತ್ತೆ ಅನುಮೋದನೆ ಪಡೆಯಬೇಕಿದೆ. </p>.<div><blockquote>ಸಾಮರ್ಥ್ಯ ನವೀಕರಣ ಪ್ರಕ್ರಿಯೆ ತಕ್ಷಣ ಆದರೆ ತ್ವರಿತವಾಗಿ ಗ್ರಿಡ್ ಸ್ಥಾಪನೆ ಆಗಲಿದೆ. ಅದರ ಹೊರತಾಗಿ ಬೇರಾವುದೇ ತೊಂದರೆಯಿಲ್ಲ </blockquote><span class="attribution">ಸುನೀಲ್ ಕುಮಾರ, ಕೆಪಿಟಿಸಿಎಲ್ ಎಂಜಿನಿಯರ್, ಶಿರಸಿ</span></div>.<p>‘ಕೇಂದ್ರ ಸರ್ಕಾರವು 110 ಕೆವಿ ಸಾಮರ್ಥ್ಯದ ಬದಲು 132 ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪನೆ ಮಾಡಬೇಕು. ಅದಕ್ಕೆ ಈ ಹಿಂದೆ ಸಲ್ಲಿಸಿದ್ದ ಯೋಜನೆ ನೀಲನಕ್ಷೆ ಬದಲಿಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಆದೇಶಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಮಂಜೂರಾಗಿದ್ದ ಐದಕ್ಕೂ ಹೆಚ್ಚು ಗ್ರಿಡ್ಗಳ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ’ ಎಂಬುದು ಕೆಪಿಟಿಸಿಎಲ್ ಅಧಿಕಾರಿಗಳ ಮಾಹಿತಿ. </p>.<p>‘ಹೆಸ್ಕಾಂ ಶಿರಸಿ ವೃತ್ತದ ಕಚೇರಿಯಿಂದ 2010 ರಿಂದ ಈವರೆಗೆ 33 ವಿದ್ಯುತ್ ಗ್ರಿಡ್ ಸ್ಥಾಪನೆಗೆ ಮಂಜೂರು ನೀಡುವಂತೆ ವಿದ್ಯುತ್ ಪ್ರಸರಣ ನಿಗಮಕ್ಕೆ ₹590 ಕೋಟಿ ಯೋಜನೆಯ ಪ್ರಸ್ತಾವ ಕಳುಹಿಸಲಾಗಿದೆ. ಅದರಲ್ಲಿ ಜಾಗದ ಕೊರತೆಯ ಕಾರಣಕ್ಕೆ ಹಲವು ಗ್ರಿಡ್ಗಳಿಗೆ ಮಂಜೂರಾತಿ ಸಿಕ್ಕಿರಲಿಲ್ಲ. ಆದರೆ ಜಾಗದ ಸಮಸ್ಯೆಯಿಲ್ಲದ ಹತ್ತರಗಿ, ಕಾನಸೂರು, ಸಾಮ್ರಾಣಿ, ತೇರಗಾಂವ, ಮಾದನಗೇರಿ ಗ್ರಿಡ್ಗಳಿಗೆ ಮಂಜೂರಾತಿ ದೊರೆತಿತ್ತು’ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.</p>.<p>‘ವಿವಿಧ ಕಾರಣಕ್ಕೆ ಇವುಗಳ ಕಾಮಗಾರಿ ನಡೆದಿರಲಿಲ್ಲ. ಆದರೆ ಈಗ ಈ ಎಲ್ಲ ಗ್ರಿಡ್ಗಳ ನೀಲನಕ್ಷೆಯನ್ನು 132 ಕೆವಿ ಸಾಮರ್ಥ್ಯದ ಗ್ರಿಡ್ ಗೆ ನವೀಕರಿಸಿ ಅನುಮೋದನೆ ಪಡೆಯಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಇವುಗಳ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>