<p><strong>ಕಾರವಾರ</strong>: ‘ಜಾತಿ, ಧರ್ಮಗಳ ಹೆಸರಿನಲ್ಲಿ ಛಿದ್ರವಾಗುತ್ತಿರುವ ಸಮಾಜದಲ್ಲಿ ಕುವೆಂಪು ಸಾರಿದ ವಿಶ್ವ ಮಾನವತೆಯ ಸಂದೇಶ ಪಾಲಿಸುವುದು ಅಗತ್ಯವಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.</p>.<p>ಇಲ್ಲಿನ ದಿವೇಕರ್ ಪದವಿ ಪೂರ್ವ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕುವೆಂಪು ಕೇವಲ ಕವಿ, ಸಾಹಿತಿಯಾಗಿರದೆ ಶತಮಾನಗಳ ಕಾಲ ಸಮಾಜ ಸನ್ಮಾರ್ಗದಲ್ಲಿ ಸಾಗುವ ಪಾಠವನ್ನು ಸಾಹಿತ್ಯದ ಮೂಲಕ ಪ್ರಸ್ತುತಪಡಿಸಿದ್ದಾರೆ. ಕನ್ನಡ ಭಾಷೆಗೆ ಅವರ ಕೊಡುಗೆ ಅನನ್ಯ. ಅವರ ಜೀವನಾದರ್ಶ ವಿಶ್ವಕ್ಕೆ ಮಾದರಿಯಾಗಿದೆ. ಅವರಿಗೆ ಕನ್ನಡ ಪ್ರೇಮದ ಜೊತೆಯಲ್ಲಿ ಪರಿಸರದ ಪ್ರೇಮ ಅಪಾರವಾಗಿತ್ತು’ ಎಂದರು.</p>.<p>ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ, ‘ಕುವೆಂಪು ಅವರು ಕನ್ನಡ ಸಾಹಿತ್ಯದ ಮೇಲ್ಪರ್ವತ ಇದ್ದಂತೆ. ಅವರು ಸಾಹಿತ್ಯದಲ್ಲಿ ಬರೆದಂತೆ ಬದುಕಿದರು. ಅಲ್ಪಮಾನವರಾಗಿರುವಂತ ಮನುಷ್ಯರನ್ನು ವಿಶ್ವ ಮಾನವನಾಗಿ ಮಾಡುವುದು ಶಿಕ್ಷಣದ ಕರ್ತವ್ಯ’ ಎಂದರು.</p>.<p>ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ, ದಿವೇಕರ್ ಪದವಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಗೀತಾ ತೋರ್ಕೆ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಲಲಿತಾ ಶೆಟ್ಟಿ, ಉಪನ್ಯಾಸಕರಾದ ಸಂತೋಷ ಶೇಟ್ , ಗಣೇಶ್ ಭಟ್ ಪಾಲ್ಗೊಂಡಿದ್ದರು.</p>.<p>ಪುಷ್ಪ ನಮನ</p>.<p>ಹಳಿಯಾಳ: ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಇಲ್ಲಿನ ತಹಶೀಲ್ದಾರ ಕಾಯಾ೯ಲಯದಲ್ಲಿ ಆಚರಿಸಲಾಯಿತು.</p>.<p>ಕಾಯ೯ಕ್ರಮದಲ್ಲಿ ತಹಶೀಲ್ದಾರ ಫೀರೊಜ ಷಾ ಸೋಮನಕಟ್ಟಿ ಮಾತನಾಡಿ, ವಿಶ್ವಮಾನವ ದಿನಾಚರಣೆಯ ಕುರಿತು ವಿವರಿಸಿದರು. ಶಿಕ್ಷಕ ವಿಠ್ಠಲ ಕೋವೆ೯ಕರ ವಿಶ್ವ ಮಾನವ ದಿನಾಚರಣೆ ಕುರಿತು ಹಾಗೂ ರಾಷ್ಟ್ರಕವಿ ಕುವೆಂಪುರವರ ಕುರಿತು ಸುಧೀರ್ಘವಾಗಿ ವಿವರಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿ, ಸಿದ್ದಪ್ಪ ಬಿರಾದಾರ, ಜಿ.ಎಸ್ ಮಠಪತಿ, ಜೆ.ಡಿ.ಗಂಗಾಧರ ಮುಂತಾದವರು ಭಾಗವಹಿಸಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ‘ಜಾತಿ, ಧರ್ಮಗಳ ಹೆಸರಿನಲ್ಲಿ ಛಿದ್ರವಾಗುತ್ತಿರುವ ಸಮಾಜದಲ್ಲಿ ಕುವೆಂಪು ಸಾರಿದ ವಿಶ್ವ ಮಾನವತೆಯ ಸಂದೇಶ ಪಾಲಿಸುವುದು ಅಗತ್ಯವಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.</p>.<p>ಇಲ್ಲಿನ ದಿವೇಕರ್ ಪದವಿ ಪೂರ್ವ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕುವೆಂಪು ಕೇವಲ ಕವಿ, ಸಾಹಿತಿಯಾಗಿರದೆ ಶತಮಾನಗಳ ಕಾಲ ಸಮಾಜ ಸನ್ಮಾರ್ಗದಲ್ಲಿ ಸಾಗುವ ಪಾಠವನ್ನು ಸಾಹಿತ್ಯದ ಮೂಲಕ ಪ್ರಸ್ತುತಪಡಿಸಿದ್ದಾರೆ. ಕನ್ನಡ ಭಾಷೆಗೆ ಅವರ ಕೊಡುಗೆ ಅನನ್ಯ. ಅವರ ಜೀವನಾದರ್ಶ ವಿಶ್ವಕ್ಕೆ ಮಾದರಿಯಾಗಿದೆ. ಅವರಿಗೆ ಕನ್ನಡ ಪ್ರೇಮದ ಜೊತೆಯಲ್ಲಿ ಪರಿಸರದ ಪ್ರೇಮ ಅಪಾರವಾಗಿತ್ತು’ ಎಂದರು.</p>.<p>ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ, ‘ಕುವೆಂಪು ಅವರು ಕನ್ನಡ ಸಾಹಿತ್ಯದ ಮೇಲ್ಪರ್ವತ ಇದ್ದಂತೆ. ಅವರು ಸಾಹಿತ್ಯದಲ್ಲಿ ಬರೆದಂತೆ ಬದುಕಿದರು. ಅಲ್ಪಮಾನವರಾಗಿರುವಂತ ಮನುಷ್ಯರನ್ನು ವಿಶ್ವ ಮಾನವನಾಗಿ ಮಾಡುವುದು ಶಿಕ್ಷಣದ ಕರ್ತವ್ಯ’ ಎಂದರು.</p>.<p>ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ, ದಿವೇಕರ್ ಪದವಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಗೀತಾ ತೋರ್ಕೆ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಲಲಿತಾ ಶೆಟ್ಟಿ, ಉಪನ್ಯಾಸಕರಾದ ಸಂತೋಷ ಶೇಟ್ , ಗಣೇಶ್ ಭಟ್ ಪಾಲ್ಗೊಂಡಿದ್ದರು.</p>.<p>ಪುಷ್ಪ ನಮನ</p>.<p>ಹಳಿಯಾಳ: ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಇಲ್ಲಿನ ತಹಶೀಲ್ದಾರ ಕಾಯಾ೯ಲಯದಲ್ಲಿ ಆಚರಿಸಲಾಯಿತು.</p>.<p>ಕಾಯ೯ಕ್ರಮದಲ್ಲಿ ತಹಶೀಲ್ದಾರ ಫೀರೊಜ ಷಾ ಸೋಮನಕಟ್ಟಿ ಮಾತನಾಡಿ, ವಿಶ್ವಮಾನವ ದಿನಾಚರಣೆಯ ಕುರಿತು ವಿವರಿಸಿದರು. ಶಿಕ್ಷಕ ವಿಠ್ಠಲ ಕೋವೆ೯ಕರ ವಿಶ್ವ ಮಾನವ ದಿನಾಚರಣೆ ಕುರಿತು ಹಾಗೂ ರಾಷ್ಟ್ರಕವಿ ಕುವೆಂಪುರವರ ಕುರಿತು ಸುಧೀರ್ಘವಾಗಿ ವಿವರಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿ, ಸಿದ್ದಪ್ಪ ಬಿರಾದಾರ, ಜಿ.ಎಸ್ ಮಠಪತಿ, ಜೆ.ಡಿ.ಗಂಗಾಧರ ಮುಂತಾದವರು ಭಾಗವಹಿಸಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>