<p><strong>ಕಾರವಾರ</strong>: ‘ಪರಿಸರ ನಾಶದಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದ ಮನುಷ್ಯ ಪಾಠ ಕಲಿಯಬೇಕಿದೆ. ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಬಹುದಾಗಿದೆ’ ಎಂದು ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ. ನಾಯ್ಕ ಹೇಳಿದರು.</p>.<p>ಇಲ್ಲಿಯ ಬಾಡದ ಶಿವಾಜಿ ಶಿಕ್ಷಣ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಕಾರವಾರ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಅನಾಹುತಗಳ ಸುದ್ದಿ ರಾರಾಜಿಸುತ್ತಿರುವ ಇಂದಿನ ದಿನಗಳಲ್ಲಿ ಗಿಡ, ಮರ, ವನಗಳ ಮಹತ್ವವನ್ನು ಯುವ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಅಗತ್ಯ’ ಎಂದರು.</p>.<p>ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನೆಯಂಗಳದಲ್ಲಿ ಔಷಧೀಯ ಸಸ್ಯಗಳನ್ನು, ಉಪಯುಕ್ತ ಔಷಧ ಮರಗಳ ಅರಣ್ಯಗಳನ್ನು ಬೆಳೆಸುವ ಕುರಿತು ಮಾಹಿತಿ ನೀಡಲಾಯಿತು. ವನೌಷಧಿಯ ಸಸಿಗಳ ಹಂಚಿಕೆ ಮಾಡಲಾಯಿತು.</p>.<p>ಬರ್ಗಲ್ನ ಅಮೃತಾ ಸಸ್ಯಮೂಲ ದ್ರವ್ಯ ಸಂಗ್ರಹಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಗಣೇಶ ನೆವರೇಕರ 200 ರಷ್ಟು ಸಸ್ಯಗಳನ್ನು ದಾನವಾಗಿ ನೀಡಿದ್ದಲ್ಲದೇ ಅವುಗಳ ಉಪಯುಕ್ತತೆ ಕುರಿತು ವಿವರಿಸಿದರು.</p>.<p>ಲಯನ್ಸ್ ಕ್ಲಬ್ ಕಾರವಾರ ಘಟಕದ ಅಧ್ಯಕ್ಷ ದೇವಾನಂದ ಮಂತ್ರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ನಾಯಕ, ಅನಿರುದ್ಧ ಹಳದೀಪುರಕರ, ವಿನಯಾ ನಾಯ್ಕ, ವಿನೋದ ನಾಯ್ಕ, ಪ್ರಕಾಶ ರಾಣೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ‘ಪರಿಸರ ನಾಶದಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದ ಮನುಷ್ಯ ಪಾಠ ಕಲಿಯಬೇಕಿದೆ. ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಬಹುದಾಗಿದೆ’ ಎಂದು ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ. ನಾಯ್ಕ ಹೇಳಿದರು.</p>.<p>ಇಲ್ಲಿಯ ಬಾಡದ ಶಿವಾಜಿ ಶಿಕ್ಷಣ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಕಾರವಾರ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಅನಾಹುತಗಳ ಸುದ್ದಿ ರಾರಾಜಿಸುತ್ತಿರುವ ಇಂದಿನ ದಿನಗಳಲ್ಲಿ ಗಿಡ, ಮರ, ವನಗಳ ಮಹತ್ವವನ್ನು ಯುವ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಅಗತ್ಯ’ ಎಂದರು.</p>.<p>ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನೆಯಂಗಳದಲ್ಲಿ ಔಷಧೀಯ ಸಸ್ಯಗಳನ್ನು, ಉಪಯುಕ್ತ ಔಷಧ ಮರಗಳ ಅರಣ್ಯಗಳನ್ನು ಬೆಳೆಸುವ ಕುರಿತು ಮಾಹಿತಿ ನೀಡಲಾಯಿತು. ವನೌಷಧಿಯ ಸಸಿಗಳ ಹಂಚಿಕೆ ಮಾಡಲಾಯಿತು.</p>.<p>ಬರ್ಗಲ್ನ ಅಮೃತಾ ಸಸ್ಯಮೂಲ ದ್ರವ್ಯ ಸಂಗ್ರಹಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಗಣೇಶ ನೆವರೇಕರ 200 ರಷ್ಟು ಸಸ್ಯಗಳನ್ನು ದಾನವಾಗಿ ನೀಡಿದ್ದಲ್ಲದೇ ಅವುಗಳ ಉಪಯುಕ್ತತೆ ಕುರಿತು ವಿವರಿಸಿದರು.</p>.<p>ಲಯನ್ಸ್ ಕ್ಲಬ್ ಕಾರವಾರ ಘಟಕದ ಅಧ್ಯಕ್ಷ ದೇವಾನಂದ ಮಂತ್ರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ನಾಯಕ, ಅನಿರುದ್ಧ ಹಳದೀಪುರಕರ, ವಿನಯಾ ನಾಯ್ಕ, ವಿನೋದ ನಾಯ್ಕ, ಪ್ರಕಾಶ ರಾಣೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>