ಶಿರಸಿ: ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆರಕನಹಳ್ಳಿಯ ಮಾರುತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಇತ್ತೀಚೆಗೆ ಭಕ್ತಿಯಿಂದ ನೆರವೇರಿತು.
ದೇವಾಲಯದ ನೂತನ ಕಟ್ಟಡದಲ್ಲಿ ಮಂಜುಗುಣಿ ಶ್ರೀನಿವಾಸ್ ಭಟ್ ಮಾರ್ಗದರ್ಶನದಲ್ಲಿ ಕೊಳಗಿಬೀಸ್ ಕುಮಾರ್ ಭಟ್ ಮತ್ತು ಕೆರೆಕೈ ಶ್ರೀಕಾಂತ್ ಭಟ್ ಅವರನ್ನು ಒಳಗೊಂಡ ವೈದಿಕರ ತಂಡದೊಂದಿಗೆ ಮಾರುತಿ ದೇವರನ್ನು ಮೇ 20ರಂದು ಅಮೃತ ಸಿದ್ದಿ ಮೂಹೂರ್ತದಲ್ಲಿ ಪ್ರತಿಷ್ಠಾಪಿಸಲಾಯಿತು. ಅದೇ ರೀತಿ ನೂತನ ದೇವಾಲಯದ ಸಮೀಪದಲ್ಲೇ ಇರುವ ಮಾರಿಕಾಂಬಾ ದೇವಿಯ ವರ್ಧಂತಿ ಉತ್ಸವವನ್ನು ನೆರವೇರಿಸಲಾಯಿತು.