ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಹಾಲಿ ಇರುವ ಕೆಲಸಗಾರರನ್ನೇ ಮುಂದುವರಿಸಲಾಗಿದೆ. ಆದರೆ, ಕೆಲವು ತಾಲ್ಲೂಕುಗಳಲ್ಲಿ ಅನುದಾನ ಕೊರತೆಯ ನೆಪವೊಡ್ಡಿ, ಹಾಲಿ ಇರುವ ಕೆಲಸಗಾರರನ್ನು ತೆಗೆದು, ಹೊಸಬರನ್ನು ನೇಮಿಸಿಕೊಳ್ಳಲಾಗಿದೆ. ಸಕಾಲದಲ್ಲಿ ವೇತನ ಪಾವತಿಸದೇ ಅನ್ಯಾಯ ಮಾಡಲಾಗುತ್ತಿದೆ. ಈ ಕೆಲಸವನ್ನೇ ನಂಬಿ ಜೀವನ ನಡೆಸುವವರಿಗೆ ಸರಿಯಾಗಿ ವೇತನ ಪಾವತಿಸಬೇಕು ಮತ್ತು ಯಾವುದೇ ನೌಕರನನ್ನು ಕೆಲಸದಿಂದ ತೆಗೆದು ಹಾಕಬಾರದು ಎಂದು ಅವರು ಒತ್ತಾಯಿಸಿದರು. ಧನಂಜಯ ನಾಯ್ಕ, ಸುಬ್ರಾಯ, ಭಾಗ್ಯಾ, ಜ್ಯೋತಿ, ಪ್ರೇಮಾ, ಕೇಶವ ಇದ್ದರು.