ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಉಚಿತವೆಂದು ಅನಗತ್ಯ ಓಡಾಟ ನಡೆಸದಿರಿ: ಶಾಸಕ ದೇಶಪಾಂಡೆ

Published 11 ಜೂನ್ 2023, 13:32 IST
Last Updated 11 ಜೂನ್ 2023, 13:32 IST
ಅಕ್ಷರ ಗಾತ್ರ

ಹಳಿಯಾಳ: ‘ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಸೌಲಭ್ಯ ಸದುಪಯೋಗವಾಗಬೇಕೆ ಹೊರತು, ಉಚಿತ ಎಂದು ಅನಗತ್ಯ ಓಡಾಟ ನಡೆಸಬಾರದು’ ಎಂದು ಶಾಸಕ ಆರ್‌.ವಿ.ದೇಶಪಾಂಡೆ ಸಲಹೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಶಕ್ತಿ ಯೋಜನೆಗೆ ಚಾಲನೆ ನೀಡಿ, ‘ಚುನಾವಣೆ ಪೂರ್ವದಲ್ಲಿ ತಿಳಿಸಿದಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಸರ್ಕಾರ ಬದ್ಧವಿದೆ’ ಎಂದರು.

ಮುಖಂಡರಾದ ಅಜರ ಬಸರಿಕಟ್ಟಿ ,ಪುರಸಭೆಯ ಕಾಂಗ್ರೆಸ್‌ ಬೆಂಬಲಿತ ಸದಸ್ಯರು, ಘಟಕ ವ್ಯವಸ್ಥಾಪಕ ಗಣೇಶ ಜವಳಿ, ವಿಭಾಗೀಯ ಅಂಕೆ ಸಂಖ್ಯೆ ಅಧಿಕಾರಿ ಇಸ್ಮಾಯಿಲ್‌ ನವಲಗುಂದ, ಸಂಚಾರ ನೀರಿಕ್ಷಕ ಸಿದ್ದಪ್ಪಾ ನಾಗಣಿ , ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಉಪಸ್ಥಿತರಿದ್ದರು.

ಹಳಿಯಾಳದಲ್ಲಿ ಶಾಸಕ ಆರ್‌ ವಿ ದೇಶಪಾಂಡೆ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಪ್ರಯಾಣಿಕರೊಂದಿಗೆ ಮಾತನಾಡಿದರು.
ಹಳಿಯಾಳದಲ್ಲಿ ಶಾಸಕ ಆರ್‌ ವಿ ದೇಶಪಾಂಡೆ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಪ್ರಯಾಣಿಕರೊಂದಿಗೆ ಮಾತನಾಡಿದರು.
ಹಳಿಯಾಳದಲ್ಲಿ ಶಾಸಕ ಆರ್‌ ವಿ ದೇಶಪಾಂಡೆ ಮಹಿಳೆಯರ ಉಚಿತ ಬಸ್‌ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಪ್ರಯಾಣಿಕರಿಗೆ ಸನ್ಮಾನಿಸಿ ಪ್ರಯಾಣಕ್ಕೆ ಶುಭ ಕೋರಿದರು.
ಹಳಿಯಾಳದಲ್ಲಿ ಶಾಸಕ ಆರ್‌ ವಿ ದೇಶಪಾಂಡೆ ಮಹಿಳೆಯರ ಉಚಿತ ಬಸ್‌ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಪ್ರಯಾಣಿಕರಿಗೆ ಸನ್ಮಾನಿಸಿ ಪ್ರಯಾಣಕ್ಕೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT