ಈ ಬಾರಿಯ ಅತಿವೃಷ್ಟಿಯ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲ ಹೊಳೆ, ನದಿಗಳು ಉಕ್ಕಿ ಹರಿದಿದ್ದಿದ್ದವು. ರಭಸದಿಂದ ಹರಿದ ನೀರಿನ ಜೊತೆಗೆ ಕೊಚ್ಚಿಕೊಂಡು ಬಂದಿದ್ದ ತ್ಯಾಜ್ಯಗಳು ಸೇತುವೆಯ ಕಂಬಗಳ ನಡುವೆ ಸಿಲುಕಿಕೊಂಡಿದ್ದವು. ನೆರೆ ಇಳಿದ ಮೇಲೆ ಈ ತ್ಯಾಜ್ಯಗಳಲ್ಲಿ ರಾಶಿಯಲ್ಲಿ ಕಣ್ಣಿಗೆ ರಾಚುತ್ತಿರುವುದು ಕುಡಿದು ಎಸೆದ ನೀರಿನ ಬಾಟಲಿಗಳು, ತಂಪು ಪಾನೀಯದ ಬಾಟಲಿ ಹಾಗೂ ತಿನಿಸುಗಳನ್ನು ತಿಂದು ಬೀಸಾಡಿರುವ ಪ್ಲಾಸ್ಟಿಕ್ ಕವರ್ಗಳು !