ಕೊಯ್ಲಿಗೆ ಮಳೆ ಭೀತಿ:ಬಹುತೇಕ ಈ ಭಾಗದಲ್ಲಿ ತೆನೆ ಮೈದಳೆದು ನಿಂತಿದೆ. ಕೆಲವು ಕಡೆ ಭತ್ತದ ಕೊಯ್ಲು ಈಗಾಗಲೇ ಆರಂಭವಾಗಿದೆ. ಆದರೆ, ಮಳೆಯ ಆತಂಕ ಹೆಚ್ಚಿನವರಿಗಿದೆ. ಮೋಡ ಕವಿದ ವಾತಾವರಣ, ಆಗಾಗ ಭೂಮಿಯನ್ನು ಮುತ್ತಿಕ್ಕುವ ಮಳೆಹನಿಗಳು ರೈತರ ಚಿಂತೆಯನ್ನು ಜಾಸ್ತಿ ಮಾಡಿದೆ. ಒಂದು ವಾರದಲ್ಲಿ ತಾಲ್ಲೂಕಿನ ಅಲ್ಲಲ್ಲಿ ಮಳೆ ಸುರಿದಿದೆ. ಮುಂದಿನ 15 ದಿನಗಳ ಕಾಲ ಮೋಡದ ವಾತಾವರಣದ ಸಂಭವವಿದ್ದು ಅಲ್ಪ ಪ್ರಮಾಣದಲ್ಲಿ ಮಳೆ ಬೀಳಬಹುದುಎಂದು ಹವಾಮಾನ ವರದಿ ಹೇಳಿದೆ.