ಸರ್ಕಾರದ ನಿಬಂಧನೆಯ ಮಿತಿಯಲ್ಲಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭಿಸಲಾಗಿದೆ. 400ಕ್ಕೂ ಹೆಚ್ಚು ವೈದಿಕರು ಒಂದೆರಡು ದಿನಗಳಲ್ಲಿ ಸಂಪನ್ನಗೊಳಿಸಬಹುದಾದ ಸಹಸ್ರಚಂಡಿ ಕಾರ್ಯಕ್ರಮವನ್ನು, ಈಗ ಕೆಲವೇ ವೈದಿಕರು ಮಾಡುತ್ತಿದ್ದಾರೆ. ಹೊರಗಿನಿಂದ ಯಾರನ್ನೂ ಕರೆಯದೇ, ಮಠದ ಪರಿವಾರದವರೇ ಈ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಇದಕ್ಕೆ 25ಕ್ಕೂ ಹೆಚ್ಚು ದಿನ ಬೇಕಾಗಬಹುದು. ಅಲ್ಲದೇ, ಮೃತ್ಯುಂಜಯ ಹವನ, ಮಹಾರುದ್ರ ಹವನ, ಧನ್ವಂತರಿ ಹೋಮ, ಲಕ್ಷ್ಮಿನೃಸಿಂಹ ಹವನ, ವಿಷ್ಣು ಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.