ಗೋಕರ್ಣ: ಸಮೀಪದ ಕುಡ್ಲೆ ಬೀಚಿನಲ್ಲಿ ಭಾನುವಾರ ಈಜಲು ಸಮುದ್ರಕ್ಕಿಳಿದ ಬೆಂಗಳೂರು ಮೂಲದ ಮೂವರು ಯುವತಿಯರು ಅಲೆಯ ಸುಳಿಗೆ ಸಿಲುಕಿ ಮುಳುಗುತ್ತಿದ್ದಾಗ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಂಗಳೂರಿನ ಜಯನಗರದ ನಿವಾಸಿಗಳಾದ ಸ್ಮಿತಾ ರವಿಚಂದ್ರನ್ (23), ನಿಹಾರಿಕಾ ಗಿರಿ (22) ಮತ್ತು ಪವಿತ್ರಾ ಸುಂದರ (22) ಅಪಾಯದಿಂದ ಪಾರಾದವರು.
ಜೀವ ರಕ್ಷಕ ಸಿಬ್ಬಂದಿ ವೀನ್ ಅಂಬಿಗ, ಮಂಜುನಾಥ್ ಹರಿಕಂತ್ರ, ಕುಡ್ಲೆ ವಾಟರ್ ಸ್ಪೋರ್ಟ್ಸ್, ಮೈ ಸ್ಟಿಕ್ ಗೋಕರ್ಣದ ಸಿಬ್ಬಂದಿ ಇದ್ದರು.