‘ದೂರದರ್ಶನ ಮರುಪ್ರಸಾರ ಕೇಂದ್ರವಿದ್ದ ಸುಮಾರು ಒಂದು ಎಕರೆಯಷ್ಟು ವಿಸ್ತಾರವಾದ ಜಾಗ ಅಬಕಾರಿ ಇಲಾಖೆಗೆ ಸೇರಿದೆ. ಇಲ್ಲಿರುವ ಕಟ್ಟಡಗಳನ್ನು ಸದ್ಯ ತೆರವುಗೊಳಿಸುವ ಬದಲು ಅಲ್ಲಿ ಗ್ರಾಮಚಾವಡಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ಜಿಲ್ಲಾಧಿಕಾರಿ ಅವರಿಗೂ ಪ್ರಸ್ತಾವ ನೀಡಲಾಗಿದೆ’ ಎಂದು ತಹಶೀಲ್ದಾರ ಎಂ.ಆರ್.ಕುಲಕರ್ಣಿ ಹೇಳಿದರು.