ಶ್ರೇಷ್ಠ ಕೃಷಿಕರಿಗೆ ಪ್ರಶಸ್ತಿ
ಇದೇ ವೇಳೆ 2025-26ನೇ ಸಾಲಿನ ಆತ್ಮ ಯೋಜನೆಯಡಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ ಅಳವಡಿಸಿಕೊಂಡು ತಾಲ್ಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಮಹಾಬಲೇಶ್ವರ ಗೌಡ ಕಬ್ಬೆ, ತೋಟಗಾರಿಕೆ ಸಂಬಂಧಿಸಿ ಆನಂದ ಹೆಗಡೆ ಹುಳಗೋಳ, ಜೇನು ಕೃಷಿಕ ಪ್ರವೀಣ ಹೆಗಡೆ ಬಕ್ಕಳ, ಕೋಳಿ ಸಾಕಣೆದಾರ ಕನ್ನ ಬಡಗಿ ತೆಪ್ಪಾರ, ಹೈನುಗಾರ ಗಣಪತಿ ಹೆಗಡೆ ಸದಾಶಿವಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿಕಸಿತ ಭಾರತ@2047ರ ಕುರಿತ ಹಸ್ತಪ್ರತಿಯನ್ನು ಬಿಡುಗಡೆ ಮಾಡಲಾಯಿತು.