<p><strong>ಹೊನ್ನಾವರ:</strong> ಶರಾವತಿ ಭೂಗತ ವಿದ್ಯುತ್ ಯೋಜನೆ (ಶರಾವತಿ ಪಂಪ್ಡ್ ಸ್ಟೋರೇಜ್) ವಿರೋಧಿಸಿ ಹಾಗೂ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬುಧವಾರ ಪಾದಯಾತ್ರೆ ಆರಂಭಗೊಂಡಿದೆ.</p>.<p>ಗೇರುಸೊಪ್ಪದ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಿಂದ ಆರಂಭಗೊಂಡಿರುವ ಪಾದಯಾತ್ರೆ ಹಡಿನಬಾಳ ತಲುಪಿದ್ದು, ಅಲ್ಲಿಂದ ಗುರುವಾರ ಪುನರಾರಂಭಗೊಂಡು ಹೊನ್ನಾವರದ ತಹಶೀಲ್ದಾರ ಕಚೇರಿಯವರೆಗೆ ಸಾಗಲಿದೆ.</p>.<p>ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಆಗಬಹುದು ಎಂಬ ಕಾರಣ ನೀಡಿ ಪೊಲೀಸರು ನೀಡಿದ ವರದಿಯಾಧರಿಸಿ ತಹಶೀಲ್ದಾರ ಪ್ರವೀಣ ಕರಾಂಡೆ ಪಾದಯಾತ್ರೆಗೆ ಅನುಮತಿ ನಿರಾಕರಿಸಿ ಹೋರಾಟ ಸಮಿತಿಗೆ ಪತ್ರ ನೀಡಿದ್ದರು. ತಹಶೀಲ್ದಾರರು ಈ ಹಿಂದೆ ಅನುಮತಿ ನೀಡಿ ರಾಜಕೀಯ ಒತ್ತಡದ ಕಾರಣಕ್ಕೆ ಪಾದಯಾತ್ರೆಗೆ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಪತ್ರಿಕಾ ಹೇಳಿಕೆ ನೀಡಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಮಾಸ್ತಪ್ಪ ನಾಯ್ಕ, ನಿಗಿದಿಯಾಗಿರುವುಂತೆ ಪಾದಯಾತ್ರೆ ನಡೆಸುವುದು ಶತಃಸಿದ್ಧ' ಎಂದು ಸವಾಲು ಹಾಕಿದ್ದರು.</p>.<p>ಪಾದಯಾತ್ರೆ ಉದ್ಘಾಟಿಸಿದ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿ, ಅಭಿವೃದ್ಧಿಯ ಹೆಸರಲ್ಲಿ ಶರಾವತಿ ನದಿ, ಪರಿಸರ ಹಾಗೂ ಜನಜೀವನದ ಮೇಲೆ ನಡೆದಿರುವ ದಾಳಿಯನ್ನು ತಡೆಗಟ್ಟಲು ಸಂಕಲ್ಪಿಸಿದಂತೆ ಪಾದಯಾತ್ರೆಗೆ ಚಾಲನೆ ನೀಡಿದ್ದೇನೆ. ಪಾದಯಾತ್ರೆ ಕಾನೂನು ಚೌಕಟ್ಟಿನಲ್ಲಿ ಶಾಂತಿಯುತವಾಗಿ ನಡೆಯಲಿದೆ' ಎಂದು ತಿಳಿಸಿದರು.</p>.<p>ಮಾಸ್ತಪ್ಪ ನಾಯ್ಕ ಮಾತನಾಡಿ, ಹೋರಾಟ ಮಾಡದೇ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಸಂಘಟಿತ ಹೋರಾಟಕ್ಕೆ ಜನರ ಬೆಂಬಲವಿದೆ' ಎಂದು ಹೇಳಿದರು.</p>.<p>ರೈತ ಮುಖಂಡ ಯು.ಎ.ಪಾಟೀಲ, ಕಮಿಷನ್ ಆಶೆಗೆ ಶರಾವತಿ ಯೋಜನೆ ಜಾರಿಗೆ ಕೆಲವರು ಮುಂದಾಗಿದ್ದಾರೆ' ಎಂದು ಆರೋಪಿಸಿದರು. ಪಾದಯಾತ್ರೆಯ ಮೊದಲ ದಿನ ನೂರಾರು ಜನರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ನಡೆದಿದೆ.</p>
<p><strong>ಹೊನ್ನಾವರ:</strong> ಶರಾವತಿ ಭೂಗತ ವಿದ್ಯುತ್ ಯೋಜನೆ (ಶರಾವತಿ ಪಂಪ್ಡ್ ಸ್ಟೋರೇಜ್) ವಿರೋಧಿಸಿ ಹಾಗೂ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬುಧವಾರ ಪಾದಯಾತ್ರೆ ಆರಂಭಗೊಂಡಿದೆ.</p>.<p>ಗೇರುಸೊಪ್ಪದ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಿಂದ ಆರಂಭಗೊಂಡಿರುವ ಪಾದಯಾತ್ರೆ ಹಡಿನಬಾಳ ತಲುಪಿದ್ದು, ಅಲ್ಲಿಂದ ಗುರುವಾರ ಪುನರಾರಂಭಗೊಂಡು ಹೊನ್ನಾವರದ ತಹಶೀಲ್ದಾರ ಕಚೇರಿಯವರೆಗೆ ಸಾಗಲಿದೆ.</p>.<p>ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಆಗಬಹುದು ಎಂಬ ಕಾರಣ ನೀಡಿ ಪೊಲೀಸರು ನೀಡಿದ ವರದಿಯಾಧರಿಸಿ ತಹಶೀಲ್ದಾರ ಪ್ರವೀಣ ಕರಾಂಡೆ ಪಾದಯಾತ್ರೆಗೆ ಅನುಮತಿ ನಿರಾಕರಿಸಿ ಹೋರಾಟ ಸಮಿತಿಗೆ ಪತ್ರ ನೀಡಿದ್ದರು. ತಹಶೀಲ್ದಾರರು ಈ ಹಿಂದೆ ಅನುಮತಿ ನೀಡಿ ರಾಜಕೀಯ ಒತ್ತಡದ ಕಾರಣಕ್ಕೆ ಪಾದಯಾತ್ರೆಗೆ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಪತ್ರಿಕಾ ಹೇಳಿಕೆ ನೀಡಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಮಾಸ್ತಪ್ಪ ನಾಯ್ಕ, ನಿಗಿದಿಯಾಗಿರುವುಂತೆ ಪಾದಯಾತ್ರೆ ನಡೆಸುವುದು ಶತಃಸಿದ್ಧ' ಎಂದು ಸವಾಲು ಹಾಕಿದ್ದರು.</p>.<p>ಪಾದಯಾತ್ರೆ ಉದ್ಘಾಟಿಸಿದ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿ, ಅಭಿವೃದ್ಧಿಯ ಹೆಸರಲ್ಲಿ ಶರಾವತಿ ನದಿ, ಪರಿಸರ ಹಾಗೂ ಜನಜೀವನದ ಮೇಲೆ ನಡೆದಿರುವ ದಾಳಿಯನ್ನು ತಡೆಗಟ್ಟಲು ಸಂಕಲ್ಪಿಸಿದಂತೆ ಪಾದಯಾತ್ರೆಗೆ ಚಾಲನೆ ನೀಡಿದ್ದೇನೆ. ಪಾದಯಾತ್ರೆ ಕಾನೂನು ಚೌಕಟ್ಟಿನಲ್ಲಿ ಶಾಂತಿಯುತವಾಗಿ ನಡೆಯಲಿದೆ' ಎಂದು ತಿಳಿಸಿದರು.</p>.<p>ಮಾಸ್ತಪ್ಪ ನಾಯ್ಕ ಮಾತನಾಡಿ, ಹೋರಾಟ ಮಾಡದೇ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಸಂಘಟಿತ ಹೋರಾಟಕ್ಕೆ ಜನರ ಬೆಂಬಲವಿದೆ' ಎಂದು ಹೇಳಿದರು.</p>.<p>ರೈತ ಮುಖಂಡ ಯು.ಎ.ಪಾಟೀಲ, ಕಮಿಷನ್ ಆಶೆಗೆ ಶರಾವತಿ ಯೋಜನೆ ಜಾರಿಗೆ ಕೆಲವರು ಮುಂದಾಗಿದ್ದಾರೆ' ಎಂದು ಆರೋಪಿಸಿದರು. ಪಾದಯಾತ್ರೆಯ ಮೊದಲ ದಿನ ನೂರಾರು ಜನರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ನಡೆದಿದೆ.</p>