ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಕರ್ಫ್ಯೂ ರೀತಿಯ ವಾತಾವರಣಕ್ಕಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಂಗಡಿಗಳು ಸಂಜೆ 6ಕ್ಕೆ ಮುಚ್ಚಬೇಕು. ನಂತರ ಕದ ಹಾಕುವುದಾದರೆಪೊಲೀಸರು ಬಂದು ಸೂಚನೆ ಕೊಟ್ಟು ಪ್ರಕ್ರಿಯೆ ಮುಗಿಯುವಷ್ಟರಲ್ಲಿರಾತ್ರಿ 8.30 ಆಗುತ್ತದೆ. ಅದರಿಂದ ನಿಷೇಧಾಜ್ಞೆಯ ಮೂಲ ಉದ್ದೇಶದ ಪಾಲನೆ ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.