‘ಬೆಳ್ಳಿಯ ತೊಟ್ಟಿಲು, ಕಣ್ಣುಗಳು, ಮೂಗುಬೊಟ್ಟು, ಬಂಗಾರದ ತಾಳಿಗಳು ಕಾಣಿಕೆ ಹುಂಡಿಯಲ್ಲಿ ಸಿಕ್ಕಿವೆ. ಸಂತಾನ ಭಾಗ್ಯ ಹರಕೆ ಫಲಿಸಿದ ಕಾರಣ ಬೆಳ್ಳಿಯ ತೊಟ್ಟಿಲುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಉಳಿದಂತೆ ಭಟ್ಕಳ ಸಾರಿಗೆ ಡಿಪೊ ಹೆಸರಲ್ಲಿ ₹ 3,500ರ ನಗದು ಹಣವನ್ನು ದೇವಿಗೆ ಸಮರ್ಪಿಸಲಾಗಿದೆ. ಉಳಿದಂತೆ ಹತ್ತನೇ ತರಗತಿ ಪರೀಕ್ಷೆ ಉತ್ತೀರ್ಣವಾಗಲೆಂದು ಕೆಲ ವಿದ್ಯಾರ್ಥಿಗಳು ಪತ್ರದಲ್ಲಿ ಬರೆದು ದೇವಿಗೆ ಸಮರ್ಪಿಸಿದ್ದಾರೆ’ ಎಂದು ದೇವಾಲಯ ಮೂಲಗಳು ಮಾಹಿತಿ ನೀಡಿವೆ.