ಸಭೆಗೆ ಶಿರಸಿ ತಹಶೀಲ್ದಾರ್ ಹೇಮಂತ ಮಾಹಿತಿ ನೀಡಿ, ತಾಲ್ಲೂಕಿನ 9 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉದ್ಭವವಾಗಿತ್ತು. ಕೊಳವೆ ಬಾವಿ, ಟ್ಯಾಂಕರ್, ಜಲಜೀವನ ಮಿಷನ್ ಯೋಜನೆಯಡಿ ಸಧ್ಯ ನೀರು ಪೂರೈಸಲಾಗುತ್ತಿದೆ. ವಾರದೊಳಗೆ ಮಳೆ ಆಗದಿದ್ದರೆ 17 ಪಂಚಾಯ್ತಿಯಲ್ಲಿ ಸಮಸ್ಯೆ ಆಗಬಹುದು. ಹಳೆಯ ಬಾವಿ ಸ್ವಚ್ಛತೆ, ಕೊಳವೆ ಬಾವಿ ದುರಸ್ತಿ ಮಾಡಿಸಲಾಗುತ್ತಿದೆ ಎಂದರು.