<p><strong>ಕಾರವಾರ</strong>: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಈಗ ‘ರೆಕ್ಕೆ’ ಮೂಡಿದೆ. ಕಲಾವಿದರೊಬ್ಬರ ಪರಿಕಲ್ಪನೆಯ ಈ ಕಲಾಕೃತಿಗೆ ಬಣ್ಣ ಬಣ್ಣದ ಗರಿಗಳಿವೆ.</p>.<p>ನಗರದಲ್ಲಿ ಪರಿಸರ ಸೌಂದರ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಬೆಟರ್ ಕಾರವಾರ’ ಸಮೂಹದಲ್ಲಿರುವ ಕಲಾವಿದ ದೀಪೇಶ ನಾಯ್ಕ ಈ ಚಿತ್ರವನ್ನು ರಚಿಸಿದ್ದಾರೆ. ಈಚೆಗೆ ಚೆನ್ನೈನಲ್ಲಿ ನಡೆದ ‘ಅಖಿಲ ಭಾರತ ಚಿತ್ರಕಲೆ ಸ್ಪರ್ಧೆ 2020’ರಲ್ಲಿ ಅವರು ಈ ಕಲಾಕೃತಿಗೆ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು.</p>.<p>ಟ್ಯಾಗೋರ್ ಕಡಲತೀರದ ಹೋಟೆಲ್ ಬಳಿಯ ಗೋಡೆಯಲ್ಲಿ ಈ ಚಿತ್ರವಿದೆ. ‘ಐ ಲವ್ ಕಾರವಾರ’ ಎಂಬ ವಾಕ್ಯದ ಕೆಳಗೆ ನಿಂತು ಸ್ಥಳೀಯರು, ಪ್ರವಾಸಿಗರು ಫೋಟೊ ತೆಗೆದುಕೊಳ್ಳಲು ಅವಕಾಶವಿದೆ. ನಗರಸಭೆ ಮತ್ತು ಕಡಲತೀರಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೆಲಸ ಮಾಡಿದ ತಂಡದಲ್ಲಿ ಸೂರಜ್ ಗೋವೆಕರ್, ಪ್ರಸಾದ್ ಸಾದಿಯೆ, ಅಮನ್ ಶೇಖ್, ನಿತೇಶ್ ನಾಯಕ್ ಉಮಾಶಂಕರ್ ಇದ್ದರು.</p>.<p>ಈ ಬಗ್ಗೆ ಮಾತನಾಡಿದ ತಂಡದ ಸದಸ್ಯ ಸೂರಜ್, ‘ನಗರಸೌಂದರ್ಯ ಕುರಿತು ನಾವು ನೋಡುವ ವಿಧಾನವನ್ನು ಸುಧಾರಿಸುವ ಒಂದು ಪ್ರಯತ್ನ ಇದಾಗಿದೆ. ನಾಗರಿಕರ, ಪ್ರವಾಸಿಗರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಂಕೇತವಾಗಿರೆಕ್ಕೆಗಳ ಕಲಾಕೃತಿಯನ್ನು ರಚಿಸಿದ್ದೇವೆ’ ಎಂದರು.</p>.<p>‘ಪ್ರವಾಸಿಗರು ಈ ಕಲಾಕೃತಿಯೊಂದಿಗೆ ನಿಂತು ಫೋಟೊ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ನಗರದ ಬಗ್ಗೆ ಮತ್ತಷ್ಟು ಪ್ರಚಾರ ಸಾಧ್ಯವಾಗುತ್ತದೆ. ಈ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಮತ್ತೊಬ್ಬಸದಸ್ಯ ಪ್ರಸಾದ್ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಈಗ ‘ರೆಕ್ಕೆ’ ಮೂಡಿದೆ. ಕಲಾವಿದರೊಬ್ಬರ ಪರಿಕಲ್ಪನೆಯ ಈ ಕಲಾಕೃತಿಗೆ ಬಣ್ಣ ಬಣ್ಣದ ಗರಿಗಳಿವೆ.</p>.<p>ನಗರದಲ್ಲಿ ಪರಿಸರ ಸೌಂದರ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಬೆಟರ್ ಕಾರವಾರ’ ಸಮೂಹದಲ್ಲಿರುವ ಕಲಾವಿದ ದೀಪೇಶ ನಾಯ್ಕ ಈ ಚಿತ್ರವನ್ನು ರಚಿಸಿದ್ದಾರೆ. ಈಚೆಗೆ ಚೆನ್ನೈನಲ್ಲಿ ನಡೆದ ‘ಅಖಿಲ ಭಾರತ ಚಿತ್ರಕಲೆ ಸ್ಪರ್ಧೆ 2020’ರಲ್ಲಿ ಅವರು ಈ ಕಲಾಕೃತಿಗೆ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು.</p>.<p>ಟ್ಯಾಗೋರ್ ಕಡಲತೀರದ ಹೋಟೆಲ್ ಬಳಿಯ ಗೋಡೆಯಲ್ಲಿ ಈ ಚಿತ್ರವಿದೆ. ‘ಐ ಲವ್ ಕಾರವಾರ’ ಎಂಬ ವಾಕ್ಯದ ಕೆಳಗೆ ನಿಂತು ಸ್ಥಳೀಯರು, ಪ್ರವಾಸಿಗರು ಫೋಟೊ ತೆಗೆದುಕೊಳ್ಳಲು ಅವಕಾಶವಿದೆ. ನಗರಸಭೆ ಮತ್ತು ಕಡಲತೀರಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೆಲಸ ಮಾಡಿದ ತಂಡದಲ್ಲಿ ಸೂರಜ್ ಗೋವೆಕರ್, ಪ್ರಸಾದ್ ಸಾದಿಯೆ, ಅಮನ್ ಶೇಖ್, ನಿತೇಶ್ ನಾಯಕ್ ಉಮಾಶಂಕರ್ ಇದ್ದರು.</p>.<p>ಈ ಬಗ್ಗೆ ಮಾತನಾಡಿದ ತಂಡದ ಸದಸ್ಯ ಸೂರಜ್, ‘ನಗರಸೌಂದರ್ಯ ಕುರಿತು ನಾವು ನೋಡುವ ವಿಧಾನವನ್ನು ಸುಧಾರಿಸುವ ಒಂದು ಪ್ರಯತ್ನ ಇದಾಗಿದೆ. ನಾಗರಿಕರ, ಪ್ರವಾಸಿಗರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಂಕೇತವಾಗಿರೆಕ್ಕೆಗಳ ಕಲಾಕೃತಿಯನ್ನು ರಚಿಸಿದ್ದೇವೆ’ ಎಂದರು.</p>.<p>‘ಪ್ರವಾಸಿಗರು ಈ ಕಲಾಕೃತಿಯೊಂದಿಗೆ ನಿಂತು ಫೋಟೊ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ನಗರದ ಬಗ್ಗೆ ಮತ್ತಷ್ಟು ಪ್ರಚಾರ ಸಾಧ್ಯವಾಗುತ್ತದೆ. ಈ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಮತ್ತೊಬ್ಬಸದಸ್ಯ ಪ್ರಸಾದ್ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>