ಕಸದಲ್ಲಿ ಸಿಕ್ಕ ಸಣ್ಣ ಆಧಾರವನ್ನು ಗುರುತಿಸಿ, ಅಕ್ರಮವಾಗಿ ಇದನ್ನು ಎಸೆದು ಹೋದವರ ಪತ್ತೆ ಹಚ್ಚಿದ ಅವರು, ಆ ವ್ಯಕ್ತಿಯನ್ನು ಸ್ಥಳಕ್ಕೆ ಕರೆಯಿಸಿ, ಅದನ್ನು ಸಂಗ್ರಹಿಸಿ, ನಗರಸಭೆ ಘನತ್ಯಾಜ್ಯ ಘಟಕಕ್ಕೆ ನೀಡುವಂತೆ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಸ ಎಸೆಯುವುದು ಸುಸಂಸ್ಕೃತ ಸಮಾಜದ ಲಕ್ಷಣವಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸ್ವಚ್ಛಗೊಳಿಸಿದ ಪ್ರದೇಶವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಸಾರ್ವಜನಿಕರ ಕರ್ತವ್ಯ. ಕಸ ಹಾಕುವುದು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿದರೆ, ಅವರಿಂದಲೇ ಕಸ ಎತ್ತಿಸಲಾಗುವುದು’ ಎಂದರು. ಕಾರ್ಯಪಡೆಯ ಶ್ರೀಕಾಂತ ಹೆಗಡೆ, ಎಂ.ಎಂ.ಭಟ್ಟ, ಮಂಜು ಮೊಗೇರ, ಅಶೋಕ ಭಟ್ಟ ಇದ್ದರು.