ನಾಲ್ವರು ಪ್ರವಾಸಿಗರಿದ್ದ ವಾಹನವನ್ನುಇಲ್ಲಿನ ಕಡಲತೀರದಿಂದ ಏಕಮುಖ ಸಂಚಾರದ ರಸ್ತೆಯಲ್ಲಿ ಚಲಾಯಿಸಿಕೊಂಡು ಬರಲಾಗಿತ್ತು. ಗೃಹರಕ್ಷಕ ಸಿಬ್ಬಂದಿ ಚಿದಾನಂದ ಶಾನಭಾಗ್ವಾಹನವನ್ನು ತಡೆದು ರಸ್ತೆ ನಿಯಮ ಉಲ್ಲಂಘನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ಪ್ರವಾಸಿಗರು, ಅವರನ್ನು ಕಿಟಕಿಯಲ್ಲಿ ಎಳೆದುಕೊಂಡು,ವಾಹನವನ್ನುವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.