<p><strong>ಕುಮಟಾ:`</strong>ಕವಿಯಾದವನು ಓದುಗನಾಗಿ ತನ್ನ ಜ್ಞಾನ ವಿಸ್ತರಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬಾರದು. ಹೊಸ ಜ್ಞಾನದ ಪರಿಧಿ ವಿಸ್ತರಿಸುವ ಶಕ್ತಿ ಕಾವ್ಯಕಿರುವುದರಿಂದಲೇ ಸಾಹಿತ್ಯಾಸಕ್ತರು ಬದುಕನ್ನು ನೋಡುವ ದೃಷ್ಟಿ ಭಿನ್ನವಾಗಿರುತ್ತದೆ’ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಕವಿ ಡಾ.ಟಿ.ಜಿ. ಭಟ್ಟ ಹಾಸಣಗಿ ಹೇಳಿದರು.</p>.<p>ತಾಲ್ಲೂಕಿನ ಹೊಲನಗದ್ದೆ ಸಮುದ್ರ ತೀರದಲ್ಲಿ ಈಚೆಗೆ ನಡೆದ ಯುಗಾದಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸಾಹಿತಿ ವೆಂಕಟೇಶ ಬೈಲೂರು ಮಾತನಾಡಿ,`ಅನುಭವ ಜನ್ಯವಾದ ಕಾವ್ಯ ಹೆಚ್ಚು ಕಾಲ ಓದುಗರ ಹೃದಯದಲ್ಲಿ ಸ್ಥಾನ ಪಡೆೆಯುತ್ತದೆ' ಎಂದರು.</p>.<p>ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ‘ಜಿಲ್ಲಾ ಕಸಾಪ ಸಾಹಿತ್ಯಸಕ್ತರಲ್ಲಿ ಬರವೆಣಿಗೆಯ ಖುಷಿ ಹೆಚ್ಚಿಸಲು ಬೇರೆ ಬೇರೆ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಹಮ್ಮಿಕೊಂಡಿದೆ’ ಎಂದು ತಿಳಿಸಿದರು.</p>.<p>ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಕಾರ್ಯದರ್ಶಿ ಉಮೇಶ ನಾಯ್ಕ, ಕಸಾಪ ಪದಾಧಿಕಾರಿಗಳಾದ ಪ್ರದೀಪ ನಾಯಕ, ಯೋಗೇಶ ಪಟಗಾರ, ನಾಗರಾಜ ಶೆಟ್ಟಿ ಇದ್ದರು.</p>.<p>ಕವಿಗಳಾದ ಗಣೇಶ ಜೋಶಿ, ಬಾಲು ಪಟಗಾರ, ದಯಾನಂದ ಬಳಗು, ರಾಜು ನಾಯ್ಕ, ಸಂಧ್ಯಾ ಅಘನಾಶಿನಿ, ಸಂಧ್ಯಾರಾಣಿ ಪಟಗಾರ, ಪ್ರವೀಣ ಕರ್ಕಿಕರ್, ರಾಜು ನಾಯ್ಕ, ದಿವಾಕರ ಘನಾಶಿನಿ, ತಜುನಾ ನಾಯಕ, ಟಿ.ಬಿ. ಗೌಡ ಕವನ ವಾಚಿಸಿದರು. ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಮಟಾ:`</strong>ಕವಿಯಾದವನು ಓದುಗನಾಗಿ ತನ್ನ ಜ್ಞಾನ ವಿಸ್ತರಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬಾರದು. ಹೊಸ ಜ್ಞಾನದ ಪರಿಧಿ ವಿಸ್ತರಿಸುವ ಶಕ್ತಿ ಕಾವ್ಯಕಿರುವುದರಿಂದಲೇ ಸಾಹಿತ್ಯಾಸಕ್ತರು ಬದುಕನ್ನು ನೋಡುವ ದೃಷ್ಟಿ ಭಿನ್ನವಾಗಿರುತ್ತದೆ’ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಕವಿ ಡಾ.ಟಿ.ಜಿ. ಭಟ್ಟ ಹಾಸಣಗಿ ಹೇಳಿದರು.</p>.<p>ತಾಲ್ಲೂಕಿನ ಹೊಲನಗದ್ದೆ ಸಮುದ್ರ ತೀರದಲ್ಲಿ ಈಚೆಗೆ ನಡೆದ ಯುಗಾದಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸಾಹಿತಿ ವೆಂಕಟೇಶ ಬೈಲೂರು ಮಾತನಾಡಿ,`ಅನುಭವ ಜನ್ಯವಾದ ಕಾವ್ಯ ಹೆಚ್ಚು ಕಾಲ ಓದುಗರ ಹೃದಯದಲ್ಲಿ ಸ್ಥಾನ ಪಡೆೆಯುತ್ತದೆ' ಎಂದರು.</p>.<p>ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ‘ಜಿಲ್ಲಾ ಕಸಾಪ ಸಾಹಿತ್ಯಸಕ್ತರಲ್ಲಿ ಬರವೆಣಿಗೆಯ ಖುಷಿ ಹೆಚ್ಚಿಸಲು ಬೇರೆ ಬೇರೆ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಹಮ್ಮಿಕೊಂಡಿದೆ’ ಎಂದು ತಿಳಿಸಿದರು.</p>.<p>ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಕಾರ್ಯದರ್ಶಿ ಉಮೇಶ ನಾಯ್ಕ, ಕಸಾಪ ಪದಾಧಿಕಾರಿಗಳಾದ ಪ್ರದೀಪ ನಾಯಕ, ಯೋಗೇಶ ಪಟಗಾರ, ನಾಗರಾಜ ಶೆಟ್ಟಿ ಇದ್ದರು.</p>.<p>ಕವಿಗಳಾದ ಗಣೇಶ ಜೋಶಿ, ಬಾಲು ಪಟಗಾರ, ದಯಾನಂದ ಬಳಗು, ರಾಜು ನಾಯ್ಕ, ಸಂಧ್ಯಾ ಅಘನಾಶಿನಿ, ಸಂಧ್ಯಾರಾಣಿ ಪಟಗಾರ, ಪ್ರವೀಣ ಕರ್ಕಿಕರ್, ರಾಜು ನಾಯ್ಕ, ದಿವಾಕರ ಘನಾಶಿನಿ, ತಜುನಾ ನಾಯಕ, ಟಿ.ಬಿ. ಗೌಡ ಕವನ ವಾಚಿಸಿದರು. ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>