<p><strong>ಕಾರವಾರ</strong>: ‘ಕಾಂಗ್ರೆಸ್ ಪಕ್ಷದ ದೊಡ್ಡ ಹುದ್ದೆಯಲ್ಲಿರುವ ಸತೀಶ ಜಾರಕಿಹೊಳಿ ಅವರ ಹೇಳಿಕೆಯು ಖಂಡನೀಯವಾಗಿದೆ. ಅವರು ಧರ್ಮದ ಅವಹೇಳನ ಮಾಡಿದಾಗ ಹಾಗೂ ಅದನ್ನು ಸರಿ ಎಂದು ಸಮರ್ಥಿಸಿಕೊಳ್ಳುವಾಗ, ಎಲ್ಲ ಧರ್ಮಗಳೂ ತಮಗೆ ಸಮಾನ ಎಂದು ಹೇಳುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ಯಾಕೆ? ಕನಿಷ್ಠ ತಪ್ಪಾಗಿದೆ ಎಂದು ಹೇಳಲು ಆಗದಷ್ಟು ಒರಟುತನವನ್ನು ಪ್ರದರ್ಶನ ಮಾಡುತ್ತಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.</p>.<p>ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ಹಿಂದೂ ಧರ್ಮೀಯರಿಗೆ, ಸಮಾಜದ ಮಠ ಮಾನ್ಯಗಳಿಗೆ ನೋವಾಗಿದೆ. ನಿಮ್ಮ ಕಾರ್ಯಾಧ್ಯಕ್ಷರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿರಾ, ಖಂಡಿಸುತ್ತೀರಾ, ಕ್ರಮ ತೆಗೆದುಕೊಳ್ತೀರಾ, ಅವರಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿಸುತ್ತೀರಾ ಅಥವಾ ಅಸಹಾಯಕರಾಗಿದ್ದೀರಾ ಎಂದು ಸ್ಪಷ್ಟಪಡಿಸಿ’ ಎಂದರು.</p>.<p>‘ಸತೀಶ ಜಾರಕಿಹೊಳಿ ವಿರುದ್ಧ ಬಿ.ಜೆ.ಪಿ.ಯಿಂದ ದೂರು ನೀಡಲಾಗಿದೆ. ಕಾನೂನು ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ’ ಎಂದೂ ಹೇಳಿದರು.</p>.<p><a href="https://www.prajavani.net/karnataka-news/cm-basavaraj-bommai-condemned-satish-jarkiholi-statement-on-hindu-word-origin-987067.html" itemprop="url">ಅಸ್ಮಿತೆಗೆ ಧಕ್ಕೆಯಾದರೆ ಹಿಂದೂಗಳು ಸಿಡಿದೇಳುತ್ತಾರೆ: ಸತೀಶ ಹೇಳಿಕೆಗೆ ಸಿ.ಎಂ ಕಿಡಿ </a></p>.<p><a href="https://www.prajavani.net/karnataka-news/satish-jarkiholi-resigns-as-mla-if-proven-wrong-hindu-986820.html" itemprop="url">ತಪ್ಪೆಂದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸತೀಶ ಜಾರಕಿಹೊಳಿ </a></p>.<p><a href="https://www.prajavani.net/karnataka-news/meaning-of-the-word-hindu-vulgar-karnataka-congress-leader-satish-laxmanrao-jarkiholi-kicks-storm-986529.html" itemprop="url">ಹಿಂದೂ ಎನ್ನುವುದುಪರ್ಷಿಯನ್ನಿನ ಅಶ್ಲೀಲ ಪದ:ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ‘ಕಾಂಗ್ರೆಸ್ ಪಕ್ಷದ ದೊಡ್ಡ ಹುದ್ದೆಯಲ್ಲಿರುವ ಸತೀಶ ಜಾರಕಿಹೊಳಿ ಅವರ ಹೇಳಿಕೆಯು ಖಂಡನೀಯವಾಗಿದೆ. ಅವರು ಧರ್ಮದ ಅವಹೇಳನ ಮಾಡಿದಾಗ ಹಾಗೂ ಅದನ್ನು ಸರಿ ಎಂದು ಸಮರ್ಥಿಸಿಕೊಳ್ಳುವಾಗ, ಎಲ್ಲ ಧರ್ಮಗಳೂ ತಮಗೆ ಸಮಾನ ಎಂದು ಹೇಳುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ಯಾಕೆ? ಕನಿಷ್ಠ ತಪ್ಪಾಗಿದೆ ಎಂದು ಹೇಳಲು ಆಗದಷ್ಟು ಒರಟುತನವನ್ನು ಪ್ರದರ್ಶನ ಮಾಡುತ್ತಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.</p>.<p>ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ಹಿಂದೂ ಧರ್ಮೀಯರಿಗೆ, ಸಮಾಜದ ಮಠ ಮಾನ್ಯಗಳಿಗೆ ನೋವಾಗಿದೆ. ನಿಮ್ಮ ಕಾರ್ಯಾಧ್ಯಕ್ಷರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿರಾ, ಖಂಡಿಸುತ್ತೀರಾ, ಕ್ರಮ ತೆಗೆದುಕೊಳ್ತೀರಾ, ಅವರಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿಸುತ್ತೀರಾ ಅಥವಾ ಅಸಹಾಯಕರಾಗಿದ್ದೀರಾ ಎಂದು ಸ್ಪಷ್ಟಪಡಿಸಿ’ ಎಂದರು.</p>.<p>‘ಸತೀಶ ಜಾರಕಿಹೊಳಿ ವಿರುದ್ಧ ಬಿ.ಜೆ.ಪಿ.ಯಿಂದ ದೂರು ನೀಡಲಾಗಿದೆ. ಕಾನೂನು ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ’ ಎಂದೂ ಹೇಳಿದರು.</p>.<p><a href="https://www.prajavani.net/karnataka-news/cm-basavaraj-bommai-condemned-satish-jarkiholi-statement-on-hindu-word-origin-987067.html" itemprop="url">ಅಸ್ಮಿತೆಗೆ ಧಕ್ಕೆಯಾದರೆ ಹಿಂದೂಗಳು ಸಿಡಿದೇಳುತ್ತಾರೆ: ಸತೀಶ ಹೇಳಿಕೆಗೆ ಸಿ.ಎಂ ಕಿಡಿ </a></p>.<p><a href="https://www.prajavani.net/karnataka-news/satish-jarkiholi-resigns-as-mla-if-proven-wrong-hindu-986820.html" itemprop="url">ತಪ್ಪೆಂದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸತೀಶ ಜಾರಕಿಹೊಳಿ </a></p>.<p><a href="https://www.prajavani.net/karnataka-news/meaning-of-the-word-hindu-vulgar-karnataka-congress-leader-satish-laxmanrao-jarkiholi-kicks-storm-986529.html" itemprop="url">ಹಿಂದೂ ಎನ್ನುವುದುಪರ್ಷಿಯನ್ನಿನ ಅಶ್ಲೀಲ ಪದ:ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>