ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ಹಿಂದೂ ಧರ್ಮೀಯರಿಗೆ, ಸಮಾಜದ ಮಠ ಮಾನ್ಯಗಳಿಗೆ ನೋವಾಗಿದೆ. ನಿಮ್ಮ ಕಾರ್ಯಾಧ್ಯಕ್ಷರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿರಾ, ಖಂಡಿಸುತ್ತೀರಾ, ಕ್ರಮ ತೆಗೆದುಕೊಳ್ತೀರಾ, ಅವರಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿಸುತ್ತೀರಾ ಅಥವಾ ಅಸಹಾಯಕರಾಗಿದ್ದೀರಾ ಎಂದು ಸ್ಪಷ್ಟಪಡಿಸಿ’ ಎಂದರು.