ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ಯಕ್ಷೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನದ ಭಾಷೆಯಲ್ಲಿ ಪ್ರೌಢಿಮೆಯಿದೆ. ಆದರೆ, ಯಕ್ಷ ದಿಗ್ಗಜರ ಮಾತುಗಳ ದಾಖಲೀಕರಣ ಆಗಿಲ್ಲ. ಹಾಗಾಗಿ ಕನ್ನಡ ಭಾಷೆ ಬಡವಾಗಿದೆ. ಇನ್ನಾದರೂ ಯಕ್ಷಗಾನ ರಂಗದದಲ್ಲಿ ಪ್ರದರ್ಶಿತವಾಗುವ ಭಾಷೆಗಳ ಜೊತೆಗೆ ದಿಗ್ಗಜ ಹಾಗೂ ಪ್ರೌಢ ಕಲಾವಿದರ ಮಾತುಗಳ ದಾಖಲೀಕರಣ ಆಗಬೇಕು ಎಂದರು.