'ಅಣ್ಣ(ಬಸನಗೌಡ)ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಈಗಾಗಲೇ ನೀಡಲಾಗಿದೆ. ಅವನಿಗೆ ಮನೆಯನ್ನು ಸಹ ಕಟ್ಟಿಸಿಕೊಟ್ಟಿದ್ದೇವೆ. ಆದರೂ ನಾವಿದ್ದ ಜಾಗವೇ ಬೇಕು ಎಂದು ಜಗಳ ಮಾಡುತ್ತಿದ್ದ. ನಿನ್ನೆ ರಾತ್ರಿ ನಾಲ್ಕು-ಐದು ಮಂದಿ ಜೊತೆಗೆ ಬಂದು, ಕಣ್ಣಿಗೆ ಖಾರಾದ ಪುಡಿ ಎರಚಿ ಚಾಕು ಇರಿದಿದ್ದಾನೆ. ವೈದ್ಯರು ಪರಿಸ್ಥಿತಿ ಗಂಭೀರವಿದ್ದು, ಎರಡು ದಿನ ನಿಗಾದಲ್ಲಿ ಇಡಬೇಕು ಎಂದಿದ್ದಾರೆ' ಎಂದು ಸಹೋದರ ಶಂಕರಗೌಡ ಮಾಧ್ಯಮದವರಿಗೆ ಹೇಳಿದರು.