ರಾಜ್ಯದ ಉತ್ತರ ಕರ್ನಾಟಕ ಭಾಗದಿಂದ ಬರುವ ಹತ್ತಿಯನ್ನು ಕುಮಟಾದಿಂದ ಮುಂಬೈ ಮೂಲಕ ಮ್ಯಾಂಚೆಸ್ಟರ್ ಗೆ ಒಯ್ಯಲು ಹೆಡ್ ಬಂದರಿನಲ್ಲಿ ಸಂಗ್ರಹಿಸಿಡಲು ಸುಣ್ಣ, ಬೆಲ್ಲ ಹಾಕಿ ಕಲೆಸಿ ಮಾಡಿದ ಗಾರೆ ಹಾಕಿ ನಿರ್ಮಿಸಿದ್ದ ಕಟ್ಟಡವನ್ನು ಈಗ ಒಡೆದು ಹಾಕಲಾಗಿದೆ. ಸುಮಾರು 200ಕ್ಕೂ ಹೆಚ್ಚು ವರ್ಷ ಕಾಲ ಬಾಳಿದ ಈ ಕಟ್ಟಡ ಗೋಡೆಯ ಮೇಲೆ ಅದಕ್ಕೆ ಹೊಂದುವ ಅದೇ ಮಾದರಿಯ ಚಾವಣಿ ಹಾಕಿ ಅಭಿವೃದ್ಧಿಪಡಿಸಿದ್ದರೆ ಅದು ಪ್ರವಾಸಿಗರ ಪ್ರಮುಖ ಆಕರ್ಷಣೆ ಯಾಗುತ್ತಿತ್ತು ಎಂದು ಅವರು ಹೇಳಿದರು.