ರಾಜ್ಯದ ವಿವಿಧ ಭಾಗಗಳ ಕಾಡಿನಲ್ಲಿ ಹಗಲು- ರಾತ್ರಿ ಉಳಿದ ವಿದ್ಯಾರ್ಥಿಗಳು ಜೀವ ವೈವಿಧ್ಯ ದಾಖಲಾತಿ ಮಾಡಿದ್ದಾರೆ. ಗೇರುಸೊಪ್ಪ, ದೇವಿಮನೆ ಅರಣ್ಯ, ಕತ್ತಲೆ ಕಾನು, ಶರಾವತಿ ಹಾಗೂ ಅಘನಾಶಿನಿ ಕೊಳ್ಳ, ಭೀಮಗಡ, ಮಾಗೋಡ, ಗಣೇಶಗುಡಿ, ದಾಂಡೇಲಿ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿ ಪ್ರಾಣಿಗಳ ಒಡನಾಟ, ಪಕ್ಷಿ ವೀಕ್ಷಣೆ, ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕೆ ಗುರುತು ಹಾಗೂ ಮೂತ್ರದ ವಾಸನೆ ಮೂಲಕ ಪ್ರಾಣಿ ಗುರುತಿಸುವುದು, ಕಾಡ್ಗಿಚ್ಚು ಆರಿಸುವ ಕ್ರಮಗಳನ್ನು ಕಲಿತಿದ್ದಾರೆ ಎನ್ನುತ್ತಾರೆ ಕಾಲೇಜಿನ ಡೀನ್ ಎಚ್. ಬಸಪ್ಪ.