<p><strong>ಶಿರಸಿ:</strong> ತಾಲ್ಲೂಕಿನಲ್ಲಿ ನಾಲ್ಕಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಪೂರ್ವ ಭಾಗದ ಬನವಾಸಿಯಲ್ಲಿ ವರದಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.<br /> <br /> ಭಾನುವಾರ ಮಧ್ಯಾಹ್ನದ ವರೆಗೂ ಬಿರುಸಾಗಿದ್ದ ಮಳೆ ನಂತರ ಕೊಂಚ ಬಿಡುವು ಕೊಟ್ಟಿದೆ.<br /> <br /> ತಾಲ್ಲೂಕಿನ ಕಾನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೊಂಡಿಲಬೈಲಿನಲ್ಲಿ ಕೆರೆಯ ಕೋಡಿ ಒಡೆದು ಸುಮಾರು 15 ಎಕರೆ ಗದ್ದೆಗೆ ಹಾನಿ ಸಂಭವಿಸಿದೆ. ಭಾನುವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 61 ಮಿ.ಮೀ. ಮಳೆ ದಾಖಲಾಗಿದೆ.<br /> <br /> <strong>ಚುರುಕು ಪಡೆದ ಕೃಷಿ ಚಟುವಟಿಕೆ</strong><br /> ಅಂಕೋಲಾ: ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ.<br /> ಕೆಲ ವರ್ಷಗಳಿಂದ ಆರಂಭದಲ್ಲಿ ಮಳೆಯು ಕೈಕೊಡುತ್ತಿದ್ದರಿಂದ ಅನ್ನದಾತನ ಕಣ್ಣೀರಿಗೆ ಕಾರಣವಾಗಿತ್ತು. ಆದರೆ ಈ ವರ್ಷ ಮಳೆ ಉತ್ತಮವಾಗಿ ಬೀಳುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತಾಲ್ಲೂಕಿನ ಸುಮಾರು 6,300 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈಗಾಗಲೇ ಸುಮಾರು 2,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಪೂರ್ಣಗೊಂಡಿದೆ.<br /> <br /> ಕಳೆದ ವರ್ಷ ಈ ವರೆಗೆ 213 ಮಿ.ಮೀ. ಮಳೆ ಬಿದ್ದಿದ್ದು, ಈ ವರ್ಷ 755 ಮಿ.ಮೀ. ಮಳೆ ಸುರಿದು ದಾಖಲೆ ನಿರ್ಮಿಸಿದೆ. ಕೂಲಿಯಾಳುಗಳ ಕೊರತೆಯ ನಡುವೆಯೂ ಕೃಷಿ ಚಟುವಟಿಕೆಯ ಮುಂದುವರಿದಿದೆ.<br /> <br /> <strong>ಕಾರಿನ ಮೇಲೆ ಮರ: ಜಖಂ<br /> ದಾಂಡೇಲಿ:</strong> ರಾತ್ರಿಯಿಡಿ ಸುರಿದ ಮಳೆಗೆ ಧರೆಗುರುಳಿದ ಮರದ ಅಡಿ ಸಿಕ್ಕ ಕಾರೊಂದು ಸಂಪೂರ್ಣ ಜಖಂಗೊಂಡ ಘಟನೆ ಇಲ್ಲಿಯ ಲೋಕೋಪಯೋಗಿ ಇಲಾಖೆ ಪ್ರವಾಸಿಗೃಹದ ಆವರಣದಲ್ಲಿ ನಡೆದಿದೆ.<br /> <br /> ಜೋಯಿಡಾ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಆನಂದ ಕುಲಕರ್ಣಿ ವಾಸವಾಗಿರುವ ನಗರದ ಲೋಕೋಪಯೋಗಿ ಇಲಾಖೆ ವಸತಿಗೃಹಕ್ಕೆ ಬೆಳಗಾವಿಯ ಅವರ ಸಂಬಂಧಿಕರಾದ ಎನ್.ಆರ್.ಜೋಷಿ ಕುಟುಂಬ ಆಗಮಿಸಿದ್ದರು.<br /> <br /> ಆವರಣದಲ್ಲಿ ನಿಲ್ಲಿಸಿಟ್ಟ ಅವರ ಕಾರಿನ ಮೇಲೆ ಪಕ್ಕದಲ್ಲೇ ಇದ್ದ ಭಾರಿ ಗಾತ್ರದ ಮರವೊಂದು ಉರುಳಿದ್ದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.<br /> <br /> <strong>ಕೊಟ್ಟಿಗೆಗೆ ಹಾನಿ<br /> ಸಿದ್ದಾಪುರ:</strong> ತಾಲ್ಲೂಕಿನಲ್ಲಿ ಭಾನುವಾರವೂ ಮಳೆಯ ರಭಸ ಮುಂದುವರಿದಿದ್ದು, ಬಿಡುವು ನೀಡುತ್ತ ಮಳೆ ಸುರಿದಿದೆ.<br /> ತಾಲ್ಲೂಕಿನ ಕೋಡ್ಕಣಿಯಲ್ಲಿ ಕೊಟ್ಟಿಗೆ ಮನೆಯೊಂದಕ್ಕೆ ಹಾನಿಯಾಗಿದ್ದು, ರೂ 15 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 52.2 ಮಿ.ಮೀ. ಮಳೆ ಸುರಿದಿದೆ.<br /> <br /> ಇದುವರೆಗೆ ಒಟ್ಟು 1762.4 ಮಿ.ಮೀ. ಮಳೆ ದಾಖಲಾಗಿದ್ದು, 824.2 ಮಿ.ಮೀ. ಮಳೆ ಸುರಿದಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾಲ್ಲೂಕಿನಲ್ಲಿ ನಾಲ್ಕಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಪೂರ್ವ ಭಾಗದ ಬನವಾಸಿಯಲ್ಲಿ ವರದಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.<br /> <br /> ಭಾನುವಾರ ಮಧ್ಯಾಹ್ನದ ವರೆಗೂ ಬಿರುಸಾಗಿದ್ದ ಮಳೆ ನಂತರ ಕೊಂಚ ಬಿಡುವು ಕೊಟ್ಟಿದೆ.<br /> <br /> ತಾಲ್ಲೂಕಿನ ಕಾನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೊಂಡಿಲಬೈಲಿನಲ್ಲಿ ಕೆರೆಯ ಕೋಡಿ ಒಡೆದು ಸುಮಾರು 15 ಎಕರೆ ಗದ್ದೆಗೆ ಹಾನಿ ಸಂಭವಿಸಿದೆ. ಭಾನುವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 61 ಮಿ.ಮೀ. ಮಳೆ ದಾಖಲಾಗಿದೆ.<br /> <br /> <strong>ಚುರುಕು ಪಡೆದ ಕೃಷಿ ಚಟುವಟಿಕೆ</strong><br /> ಅಂಕೋಲಾ: ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ.<br /> ಕೆಲ ವರ್ಷಗಳಿಂದ ಆರಂಭದಲ್ಲಿ ಮಳೆಯು ಕೈಕೊಡುತ್ತಿದ್ದರಿಂದ ಅನ್ನದಾತನ ಕಣ್ಣೀರಿಗೆ ಕಾರಣವಾಗಿತ್ತು. ಆದರೆ ಈ ವರ್ಷ ಮಳೆ ಉತ್ತಮವಾಗಿ ಬೀಳುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತಾಲ್ಲೂಕಿನ ಸುಮಾರು 6,300 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈಗಾಗಲೇ ಸುಮಾರು 2,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಪೂರ್ಣಗೊಂಡಿದೆ.<br /> <br /> ಕಳೆದ ವರ್ಷ ಈ ವರೆಗೆ 213 ಮಿ.ಮೀ. ಮಳೆ ಬಿದ್ದಿದ್ದು, ಈ ವರ್ಷ 755 ಮಿ.ಮೀ. ಮಳೆ ಸುರಿದು ದಾಖಲೆ ನಿರ್ಮಿಸಿದೆ. ಕೂಲಿಯಾಳುಗಳ ಕೊರತೆಯ ನಡುವೆಯೂ ಕೃಷಿ ಚಟುವಟಿಕೆಯ ಮುಂದುವರಿದಿದೆ.<br /> <br /> <strong>ಕಾರಿನ ಮೇಲೆ ಮರ: ಜಖಂ<br /> ದಾಂಡೇಲಿ:</strong> ರಾತ್ರಿಯಿಡಿ ಸುರಿದ ಮಳೆಗೆ ಧರೆಗುರುಳಿದ ಮರದ ಅಡಿ ಸಿಕ್ಕ ಕಾರೊಂದು ಸಂಪೂರ್ಣ ಜಖಂಗೊಂಡ ಘಟನೆ ಇಲ್ಲಿಯ ಲೋಕೋಪಯೋಗಿ ಇಲಾಖೆ ಪ್ರವಾಸಿಗೃಹದ ಆವರಣದಲ್ಲಿ ನಡೆದಿದೆ.<br /> <br /> ಜೋಯಿಡಾ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಆನಂದ ಕುಲಕರ್ಣಿ ವಾಸವಾಗಿರುವ ನಗರದ ಲೋಕೋಪಯೋಗಿ ಇಲಾಖೆ ವಸತಿಗೃಹಕ್ಕೆ ಬೆಳಗಾವಿಯ ಅವರ ಸಂಬಂಧಿಕರಾದ ಎನ್.ಆರ್.ಜೋಷಿ ಕುಟುಂಬ ಆಗಮಿಸಿದ್ದರು.<br /> <br /> ಆವರಣದಲ್ಲಿ ನಿಲ್ಲಿಸಿಟ್ಟ ಅವರ ಕಾರಿನ ಮೇಲೆ ಪಕ್ಕದಲ್ಲೇ ಇದ್ದ ಭಾರಿ ಗಾತ್ರದ ಮರವೊಂದು ಉರುಳಿದ್ದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.<br /> <br /> <strong>ಕೊಟ್ಟಿಗೆಗೆ ಹಾನಿ<br /> ಸಿದ್ದಾಪುರ:</strong> ತಾಲ್ಲೂಕಿನಲ್ಲಿ ಭಾನುವಾರವೂ ಮಳೆಯ ರಭಸ ಮುಂದುವರಿದಿದ್ದು, ಬಿಡುವು ನೀಡುತ್ತ ಮಳೆ ಸುರಿದಿದೆ.<br /> ತಾಲ್ಲೂಕಿನ ಕೋಡ್ಕಣಿಯಲ್ಲಿ ಕೊಟ್ಟಿಗೆ ಮನೆಯೊಂದಕ್ಕೆ ಹಾನಿಯಾಗಿದ್ದು, ರೂ 15 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 52.2 ಮಿ.ಮೀ. ಮಳೆ ಸುರಿದಿದೆ.<br /> <br /> ಇದುವರೆಗೆ ಒಟ್ಟು 1762.4 ಮಿ.ಮೀ. ಮಳೆ ದಾಖಲಾಗಿದ್ದು, 824.2 ಮಿ.ಮೀ. ಮಳೆ ಸುರಿದಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>