ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ವೈದ್ಯರನ್ನು ನಿಯೋಜಿಸುವ ಭರವಸೆಯನ್ನು ನೀಡಿದರಲ್ಲದೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಂಕೋಲಾಕ್ಕೆ ಗೋಕರ್ಣ ಆಸ್ಪತ್ರೆಯ ಡಾ. ಜಗದೀಶ ನಾಯ್ಕ ಮತ್ತು ಪ್ರಸ್ತುತ ಇಲ್ಲಿಂದ ರಾಜೀನಾಮೆ ನೀಡಿ ಹೋಗಿರುವ ಡಾ. ಸುಮಲತಾ ಅವರನ್ನು, ಮುಂಡಗೋಡದಿಂದ ಮತ್ತೊಬ್ಬ ವೈದ್ಯರನ್ನು ನೇಮಕಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಪ್ಪಣ್ಣ ಕಾಂಬಳೆ, ಪ್ರಮುಖರಾದ ಅನ್ವರ ಮುಲ್ಲಾ ಆಸ್ಪತ್ರೆಗಳ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕಕುಮಾರ, ತಹಶೀಲ್ದಾರ ಜಿ.ಎನ್. ನಾಯ್ಕ, ಡಾ. ಮಹೇಂದ್ರ ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾರ್ವೇಕರ, ಸಹಕಾರಿ ಧುರೀಣ ಆರ್.ಎನ್. ನಾಯಕ, ಪ್ರಮುಖರಾದ ರಂಜನ್ ಹಿಚ್ಕಡ, ಗೋಪು ಅಡ್ಲೂರು ಮುಂತಾದವರು ಉಪಸ್ಥಿತರಿದ್ದರು. ಸಚಿವರು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುತ್ತಿರುವಾಗಲೇ ವಿದ್ಯುತ್ ಕಡಿತ ಉಂಟಾಗಿದ್ದರಿಂದ ಟಾರ್ಚ್ ಬೆಳಕಿನಲ್ಲಿ ತಪಾಸಣೆ ನಡೆಸಿ, ನಿರ್ಗಮಿಸಿದರು.