ಇಂತಹ ಉತ್ಸವಗಳ ಬಗ್ಗೆ ನನ್ನ ವಿರೋಧವಿದೆ. ಒಬ್ಬ ಜನತಂತ್ರವಾದಿಯಾಗಿ ಇಂತಹ ಉತ್ಸವಗಳನ್ನು ಒಪ್ಪಲಾರೆ. ಉತ್ಸವಗಳ ಹೆಸರಿನಲ್ಲಿ ನಡೆವ ಕೋಟ್ಯಂತರ ರೂಪಾಯಿಗಳ ದುರ್ವವ್ಯಹಾರದ ತಿಳಿವಳಿಕೆ ನನಗಿದೆ. ಈ ಉತ್ಸವ ಕೂಟಗಳಲ್ಲಿ ಭಾಗವಹಿಸುವ ಮೂಲಕ ಅಂತಹದ್ದಕ್ಕೆ ಪರೋಕ್ಷ ಸಮ್ಮತಿ ನೀಡುವ ಅಥವಾ ಅಂತಹ ಪಾಪದಲ್ಲಿ ಪಾಲ್ಗೊಳ್ಳುವ ಕವಿ ನಾನಾಗಲಾರೆ. ನನ್ನ ಅಸಮ್ಮತಿಯ ನಂತರವೂ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಪ್ರಕಟವಾಗಿದೆ. ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.