<p><strong>ಹೊಸಪೇಟೆ (ವಿಜಯನಗರ): </strong>ನಿವೇಶನ, ಮನೆಗೆ ಸಂಬಂಧಿಸಿದಂತೆ ನಗರಸಭೆ ಸಕಾಲಕ್ಕೆ ದಾಖಲೆ ಕೊಡಬೇಕೆಂದು ವಿಜಯನಗರ ನಾಗರಿಕ ವೇದಿಕೆ, ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.</p>.<p>ಈ ಸಂಬಂಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.</p>.<p>ನಗರಸಭೆ ಯಾರೊಂದಿಗೂ ಚರ್ಚಿಸದೇ ಏಕಾಏಕಿ ಆಸ್ತಿ ತೆರಿಗೆಯನ್ನು ಹೆಚ್ಚಿಸಿದೆ. ಆದರೆ, ನಾಗರಿಕರ ಮ್ಯುಟೇಶನ್, ಫಾರಂ ನಂಬರ್ 3 ಸಕಾಲಕ್ಕೆ ಕೊಡುತ್ತಿಲ್ಲ. ನಿವೇಶನ ಖರೀದಿ, ಮಾರಾಟ, ಮನೆ ನಿರ್ಮಾಣಕ್ಕೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ನಗರಸಭೆ ವಿರುದ್ಧ ಸಾರ್ವಜನಿಕರು ತೀವ್ರ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.</p>.<p>2000ನೇ ಇಸ್ವಿಯಲ್ಲಿ ಕೃಷಿ ಜಮೀನಿಗೆ ಸಂಬಂಧಿಸಿದ ಪಹಣಿ ಸೇರಿದಂತೆ ಇತರೆ ದಾಖಲೆಗಳನ್ನು ಪಡೆಯಲು ಉತ್ತಮ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯ ವ್ಯವಸ್ಥೆ ನಗರಸಭೆಯಲ್ಲೂ ಜಾರಿಗೆ ತರಬೇಕು ಎಂದು ಹಕ್ಕೊತ್ತಾಯ ಮಾಡಿದರು.</p>.<p>ಮುಖಂಡರಾದ ವೈ. ಯಮುನೇಶ್, ಯು.ಆಂಜನೇಯಲು, ಎಚ್.ತಿಪ್ಪೇಸ್ವಾಮಿ, ಯು.ಅಶ್ವತ್ಥಪ್ಪ, ಸಣ್ಣ ಮಾರೆಪ್ಪ, ಬಿ.ಜಹಾಂಗೀರ್, ಮಹೇಶ್ ಮಾಚಲ್, ಕಾಶಿ ವಿಶ್ವನಾಥ, ಬುದ್ದಿ ರಾಮಕೃಷ್ಣ, ಯು.ಯಂಕಪ್ಪ, ಶೇಕ್ ಮೆಹಬೂಬ್ ಬಾಷ, ಕೆ.ವೀರೇಶ್, ಜಿ.ಸೋಮಣ್ಣ, ಮಧುಸೂದನ್, ನಜೀರ್ ಸಾಬ್, ಎಂ.ಬಸವರಾಜ್, ಕುಬೇರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>ನಿವೇಶನ, ಮನೆಗೆ ಸಂಬಂಧಿಸಿದಂತೆ ನಗರಸಭೆ ಸಕಾಲಕ್ಕೆ ದಾಖಲೆ ಕೊಡಬೇಕೆಂದು ವಿಜಯನಗರ ನಾಗರಿಕ ವೇದಿಕೆ, ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.</p>.<p>ಈ ಸಂಬಂಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.</p>.<p>ನಗರಸಭೆ ಯಾರೊಂದಿಗೂ ಚರ್ಚಿಸದೇ ಏಕಾಏಕಿ ಆಸ್ತಿ ತೆರಿಗೆಯನ್ನು ಹೆಚ್ಚಿಸಿದೆ. ಆದರೆ, ನಾಗರಿಕರ ಮ್ಯುಟೇಶನ್, ಫಾರಂ ನಂಬರ್ 3 ಸಕಾಲಕ್ಕೆ ಕೊಡುತ್ತಿಲ್ಲ. ನಿವೇಶನ ಖರೀದಿ, ಮಾರಾಟ, ಮನೆ ನಿರ್ಮಾಣಕ್ಕೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ನಗರಸಭೆ ವಿರುದ್ಧ ಸಾರ್ವಜನಿಕರು ತೀವ್ರ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.</p>.<p>2000ನೇ ಇಸ್ವಿಯಲ್ಲಿ ಕೃಷಿ ಜಮೀನಿಗೆ ಸಂಬಂಧಿಸಿದ ಪಹಣಿ ಸೇರಿದಂತೆ ಇತರೆ ದಾಖಲೆಗಳನ್ನು ಪಡೆಯಲು ಉತ್ತಮ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯ ವ್ಯವಸ್ಥೆ ನಗರಸಭೆಯಲ್ಲೂ ಜಾರಿಗೆ ತರಬೇಕು ಎಂದು ಹಕ್ಕೊತ್ತಾಯ ಮಾಡಿದರು.</p>.<p>ಮುಖಂಡರಾದ ವೈ. ಯಮುನೇಶ್, ಯು.ಆಂಜನೇಯಲು, ಎಚ್.ತಿಪ್ಪೇಸ್ವಾಮಿ, ಯು.ಅಶ್ವತ್ಥಪ್ಪ, ಸಣ್ಣ ಮಾರೆಪ್ಪ, ಬಿ.ಜಹಾಂಗೀರ್, ಮಹೇಶ್ ಮಾಚಲ್, ಕಾಶಿ ವಿಶ್ವನಾಥ, ಬುದ್ದಿ ರಾಮಕೃಷ್ಣ, ಯು.ಯಂಕಪ್ಪ, ಶೇಕ್ ಮೆಹಬೂಬ್ ಬಾಷ, ಕೆ.ವೀರೇಶ್, ಜಿ.ಸೋಮಣ್ಣ, ಮಧುಸೂದನ್, ನಜೀರ್ ಸಾಬ್, ಎಂ.ಬಸವರಾಜ್, ಕುಬೇರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>