ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ | ಸ್ಮಾರಕಗಳ ನಡುವೆ ಜಾನಪದ ಲೋಕ ಸೃಷ್ಟಿ

ರಸ್ತೆಯ ಎರಡು ಬದಿ ನಿಂತಿದ್ದ ಜನ ರಾಜ್ಯದ ವಿವಿಧ ಭಾಗಗಳ ಕಲಾತಂಡಗಳು ಭಾಗಿ
Published 5 ಫೆಬ್ರುವರಿ 2024, 6:46 IST
Last Updated 5 ಫೆಬ್ರುವರಿ 2024, 6:46 IST
ಅಕ್ಷರ ಗಾತ್ರ

ಹಂಪಿ (ವಿಜಯನಗರ): ಐತಿಹಾಸಿಕ ಸ್ಮಾರಕಗಳ ನಡುವೆ ರವಿ ಮರೆಯಾಗುತ್ತಿದ್ದಂತೆ ಇತ್ತ ಹಂಪಿಯ ಬೀದಿಗಳಲ್ಲಿ ಜಾನಪದ ಕಲಾಲೋಕ ಮೇಳೈಸಿತು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಲೋಕವನ್ನ ಸೃಷ್ಟಿಸಿದರು.

ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿಯ ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು. ರಾಜಗಾಂಭಿರ್ಯದಿಂದ ಗಜರಾಜ ಮುಂದೆ ಹೆಜ್ಜೆ ಹಾಕಿದರೆ, ಅಲಕೃಂತ ಮಂಟಪದಲ್ಲಿ ತಾಯಿ ಭುವನೇಶ್ವರಿಯ ಉತ್ಸವ ಮೂರ್ತಿ ಹಿಂದೆ ಸಾಗಿತು, ರಸ್ತೆಯುದ್ದಕ್ಕೂ ನಿಂತಿದ ಜನ ಕೈ ಮುಗಿದು ಭಕ್ತಿ ಸಮರ್ಪಿಸಿದರು.

ರಸ್ತೆಯ ಎರಡೂ ಬದಿ ನಿಂತಿದ್ದ ಜನರು ಕಲಾವಿದರನ್ನು ಹುರಿದುಂಬಿಸಿ ಹುಮ್ಮಸ್ಸು ತುಂಬಿದರು. ವಿದೇಶಿ ಪ್ರಜೆಗಳು ಸೇರಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತಾಯಿ ಭುವನೇಶ್ವರಿಗೆ ನಮಿಸಿದರು.

ಹಂಪಿ ಉತ್ಸವ ಪ್ರಯುಕ್ತ ಭಾನುವಾರ ಸಂಜೆ ನಡೆದ ಜಾನಪದ ವಾಹಿನಿ ಕಲಾತಂಡಗಳ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ  –‍ಪ್ರಜಾವಾಣಿ ಚಿತ್ರ
ಹಂಪಿ ಉತ್ಸವ ಪ್ರಯುಕ್ತ ಭಾನುವಾರ ಸಂಜೆ ನಡೆದ ಜಾನಪದ ವಾಹಿನಿ ಕಲಾತಂಡಗಳ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ  –‍ಪ್ರಜಾವಾಣಿ ಚಿತ್ರ

ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿಯ  ವೀರಭದ್ರೇಶ್ವರ ತಂಡ, ಕೂಡ್ಲಿಗಿ ತಾಲ್ಲೂಕಿನ ಚೌಡಪುರದವರ ಬಸವೇಶ್ವರ ತಂಡದ ನಂದಿ ಧ್ವಜ ಕುಣಿತ, ರಾಣೆಬೆನ್ನೂರಿನ ಮಲ್ಲೆಪ್ಪ, ಮಂಡ್ಯದ ಸಿದ್ದಾರ್ಥ್ ತಂಡದ ವೀರಗಾಸೆ, ರಾಮಸಾಗರದ ಛಲವಾದಿ ಕಾಳೆ ವಾದಕ, ಗಾದಿಗನೂರಿನ ಅಲಿಗೆ ವಾದನ ನೆರದವರ ಗಮನ ಸೆಳೆಯಿತು.

ಸಾಮಾನ್ಯವಾಗಿ ಮಹಿಳೆಯರು ಕಹಳೆ ಊದುವುದಿಲ್ಲ. ಆದರೆ ಹಂಪಿಯಲ್ಲಿ ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ಜನರಿಗೆ ಲಭಿಸಿತು  –ಪ್ರಜಾವಾಣಿ ಚಿತ್ರ
ಸಾಮಾನ್ಯವಾಗಿ ಮಹಿಳೆಯರು ಕಹಳೆ ಊದುವುದಿಲ್ಲ. ಆದರೆ ಹಂಪಿಯಲ್ಲಿ ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ಜನರಿಗೆ ಲಭಿಸಿತು  –ಪ್ರಜಾವಾಣಿ ಚಿತ್ರ

ಹಳೆ ಮಲಪನ ಗುಡಿಯ ಉಲ್ತೆಪ್ಪ ತಂಡ, ಜಯಲಕ್ಷ್ಮಿ ಮಕ್ಕಳ ಡೊಳ್ಳು ಕುಣಿತ ತಂಡದ ಕುಣಿತ, ರಾಮನಗರ ಮಾರಮ್ಮ ತಂಡ, ಮಂಡ್ಯದ ಸವಿತಾ ಚಿರ್ ಕುಣಯ ಅವರ ಪೂಜಾ ಕುಣಿತ, ಕೊಪ್ಪಳ,  ಹಗರಿಬೊಮ್ಮನಹಳ್ಳಿ ಬುಡ್ಗ ಜಂಗಮ ತಂಡಗಳ  ಹಗಲು ವೇಷ ಹಾಗೂ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಿದವು.

ಜಾನಪದ ವಾಹಿನಿಯಲ್ಲಿ ಗಮನ ಸೆಳೆದ ಕಲಾವಿದೆಯ  ಪೂಜಾ ಕುಣಿತ  –ಪ್ರಜಾವಾಣಿ ಚಿತ್ರ
ಜಾನಪದ ವಾಹಿನಿಯಲ್ಲಿ ಗಮನ ಸೆಳೆದ ಕಲಾವಿದೆಯ  ಪೂಜಾ ಕುಣಿತ  –ಪ್ರಜಾವಾಣಿ ಚಿತ್ರ

ಜಾನಪದ ವಾಹಿನಿಗೆ ಶಾಸಕ ಎಚ್‌.ಆರ್.ಗವಿಯಪ್ಪ ಚಾಲನೆ ನೀಡಿದರು, ಮೆರವಣಿಗೆಯೂದ್ದಕ್ಕೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT