ವಿದ್ಯುತ್ ತಂತಿಗೆ ಚಿರತೆ ಸಿಲುಕಿ ಸಾವಿಗೀಡಾಗಿದ್ದು, ಬಳಿಕ ಅದನ್ನು ಹೊಲದಲ್ಲಿ ಹೂತು ಹಾಕಿದ್ದಾರೆ ಎಂದು ಗೊತ್ತಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮೇರ್ಮಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಮೇರ್ಮಲ್ ತಲೆಮರೆಸಿಕೊಂಡಿದ್ದಾರೆ. ಚಿರತೆ ಹೂತು ಹಾಕಲು ಸುಮೇರ್ಮಲ್ಗೆ ಸಹಕರಿಸಿದ ರಾಜಪ್ಪ, ಹನುಮಂತ, ಮಲ್ಲೇಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಹೊಲದಲ್ಲಿರುವ ಮನೆಯಿಂದ ಚಿರತೆ ಚರ್ಮ ಕೂಡ ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.