<p><strong>ಹೊಸಪೇಟೆ (ವಿಜಯನಗರ): ‘</strong>500 ವರ್ಷಗಳ ಹಿಂದೆಯೇ ಕನ್ನಡದ ಗಟ್ಟಿ ನೆಲವಾಗಿದ್ದ ಹಂಪಿ ಇಂದು ಸಹ ಅದನ್ನು ಉಳಿಸಿಕೊಂಡಿದ್ದು, ಇಂತಹ ಉತ್ಸವಗಳಿಗೆ ಸರ್ಕಾರದ ಅನುದಾನದಲ್ಲಿ ಕೊರತೆ ಆಗುವುದಿಲ್ಲ’ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.</p>.<p>ಇಲ್ಲಿ ಶುಕ್ರವಾರ ಹಂಪಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಎಂ.ಪಿ.ಪ್ರಕಾಶ್ ಅವರು ಉತ್ಸವ ಸಂಸ್ಕೃತಿಗೆ ನಾಂದಿ ಹಾಡಿದರು. ಅವರ ಪ್ರೇರಣೆಯಿಂದ ಹಂಪಿಯ ಜತೆಗೆ ಆನೆಗುಂದಿ, ಕನಕಗಿರಿ ಸಹಿತ ಹಲವು ಉತ್ಸವಗಳನ್ನು ಆಚರಿಸಲಾಗುತ್ತಿದೆ’ ಎಂದರು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ನಟ ರಮೇಶ್ ಅರವಿಂದ್, ನಟಿಯರಾದ ಪ್ರೇಮಾ, ಪೂಜಾ ಗಾಂಧಿ ಮಾತನಾಡಿದರು. ಜಿಲ್ಲೆಯ ಶಾಸಕರು ಹಾಜರಿದ್ದರು. ಫಲಫುಷ್ಪ ಪ್ರದರ್ಶನ ಸಹಿತ ಹಲವು ಪ್ರದರ್ಶನಗಳನ್ನು ಉದ್ಘಾಟಿಸಲಾಯಿತು. </p>.<p>ಸಿಎಂ, ಡಿಸಿಎಂ, ಪ್ರವಾಸೋದ್ಯಮ ಸಚಿವರ ಗೈರು, ಬಿಸಿಲು, ಪರೀಕ್ಷೆ ಸಹಿತ ಹಲವು ಕಾರಣಗಳಿಂದ ಈ ಬಾರಿಯ ಹಂಪಿ ಉತ್ಸವದ ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಬರಲಿಲ್ಲ. ಕಳೆದ ವರ್ಷ ಮೊದಲ ದಿನ 1.50 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): ‘</strong>500 ವರ್ಷಗಳ ಹಿಂದೆಯೇ ಕನ್ನಡದ ಗಟ್ಟಿ ನೆಲವಾಗಿದ್ದ ಹಂಪಿ ಇಂದು ಸಹ ಅದನ್ನು ಉಳಿಸಿಕೊಂಡಿದ್ದು, ಇಂತಹ ಉತ್ಸವಗಳಿಗೆ ಸರ್ಕಾರದ ಅನುದಾನದಲ್ಲಿ ಕೊರತೆ ಆಗುವುದಿಲ್ಲ’ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.</p>.<p>ಇಲ್ಲಿ ಶುಕ್ರವಾರ ಹಂಪಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಎಂ.ಪಿ.ಪ್ರಕಾಶ್ ಅವರು ಉತ್ಸವ ಸಂಸ್ಕೃತಿಗೆ ನಾಂದಿ ಹಾಡಿದರು. ಅವರ ಪ್ರೇರಣೆಯಿಂದ ಹಂಪಿಯ ಜತೆಗೆ ಆನೆಗುಂದಿ, ಕನಕಗಿರಿ ಸಹಿತ ಹಲವು ಉತ್ಸವಗಳನ್ನು ಆಚರಿಸಲಾಗುತ್ತಿದೆ’ ಎಂದರು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ನಟ ರಮೇಶ್ ಅರವಿಂದ್, ನಟಿಯರಾದ ಪ್ರೇಮಾ, ಪೂಜಾ ಗಾಂಧಿ ಮಾತನಾಡಿದರು. ಜಿಲ್ಲೆಯ ಶಾಸಕರು ಹಾಜರಿದ್ದರು. ಫಲಫುಷ್ಪ ಪ್ರದರ್ಶನ ಸಹಿತ ಹಲವು ಪ್ರದರ್ಶನಗಳನ್ನು ಉದ್ಘಾಟಿಸಲಾಯಿತು. </p>.<p>ಸಿಎಂ, ಡಿಸಿಎಂ, ಪ್ರವಾಸೋದ್ಯಮ ಸಚಿವರ ಗೈರು, ಬಿಸಿಲು, ಪರೀಕ್ಷೆ ಸಹಿತ ಹಲವು ಕಾರಣಗಳಿಂದ ಈ ಬಾರಿಯ ಹಂಪಿ ಉತ್ಸವದ ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಬರಲಿಲ್ಲ. ಕಳೆದ ವರ್ಷ ಮೊದಲ ದಿನ 1.50 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>