‘ವಿಶ್ವವಿಖ್ಯಾತ ವಿದ್ಯಾವಂತರಾಗಿ’
‘ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತ ವಿದ್ಯಾವಂತರಾಗಿದ್ದರು. ವಿದ್ಯಾರ್ಥಿಗಳು ಇದೇ ಛಲ ತೊಟ್ಟು ಅದನ್ನು ಸಾಧಿಸುವ ಪ್ರಯತ್ನ ಮಾಡಿಬೇಕು. ವಿಶ್ವಕೋಶದ ಮೇಲೆ ಕಣ್ಣಾಡಿಸಿ ನಿಖರವಾಗಿ ಯಾವ ಪುಟದಲ್ಲಿ ಯಾವ ಮಾಹಿತಿ ಇದೆ ಎಂದು ಹೇಳುವಂತಹ ಅಪೂರ್ವ ನೆನಪಿನ ಶಕ್ತಿ ವಿವೇಕಾನಂದರಲ್ಲಿ ಇತ್ತು. ಗುರುಭಕ್ತಿ ಬ್ರಹ್ಮಚರ್ಯ ಮತ್ತು ಜ್ಞಾನದಾಹಗಳೇ ಇದಕ್ಕೆ ಕಾರಣವಾಗಿತ್ತು. ಗುರುಭಕ್ತಿ ಇದ್ದರೆ ಗುರುಗಳು ಮಾಡುವ ಯಾವ ಪಾಠವೂ ಕಷ್ಟ ಎನಿಸದು’ ಎಂದು ಸ್ವಾಮಿ ನಿರ್ಭಯಾನಂದಜಿ ಹೇಳಿದರು.