ಕೊಯಿಲಾರಗಟ್ಟಿ ಗ್ರಾಮದ ಸಿಂಗಟಾಲೂರು ವೀರೇಶ (32) ಮೃತರು. ಶನಿವಾರ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದ ಯುವಕ ಊಟ ಮುಗಿಸಿಕೊಂಡು ಬಾವಿ ಹತ್ತಿರದ ಹುಣಸೆ ಮರ ಏರಿದ್ದಾನೆ. ಆಕಸ್ಮಿಕವಾಗಿ ಮರದಿಂದ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾನೆ ಎಂದು ಮೃತನ ಸಂಬಂಧಿಗಳು ನೀಡಿದ ದೂರಿನನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ