<p><strong>ಹೊಸಪೇಟೆ (ವಿಜಯನಗರ):</strong> ‘ತಮಿಳುನಾಡು ಮತ್ತು ಕೇರಳ ಸರ್ಕಾರಗಳು ದ್ವಿಭಾಷಾ ನೀತಿಯನ್ನು ಅನುಸರಿಸಿದ ರೀತಿ ಕರ್ನಾಟಕ ಸರ್ಕಾರವೂ ದ್ವಿಭಾಷಾ ಸೂತ್ರವನ್ನು ಒಪ್ಪಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ನಿರಾಕರಿಸಬೇಕು’ ಎಂದು ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ಸಲಹೆ ನೀಡಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದಲ್ಲಿ ಘಟಿಕೋತ್ಸವಲ್ಲಿ ಮಾತನಾಡಿದ ಅವರು, ‘ಕುವೆಂಪು ಅವರು ಬಹುಹಿಂದೆಯೇ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬ ಸೂತ್ರ ಪ್ರತಿಪಾದಿಸಿದ್ದಾರೆ’ ಎಂದರು.</p>.<p>‘ಹಿಂದಿಯನ್ನು ರಾಷ್ಟ್ರ ಭಾಷೆ ಎಂಬಂತೆ ಬಿಂಬಿಸುತ್ತಿರುವುದು ಹಿಂದಿಯೇತರ ರಾಜ್ಯಗಳಿಗೆ ತೊಡಕಾಗಿದೆ. ವಾಸ್ತವವಾಗಿ ನಮ್ಮ ಸಂವಿಧಾನವು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂಬುದಾಗಿ ಘೋಷಿಸಿಲ್ಲ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಂಪರ್ಕ ಭಾಷೆಗಳೆಂದು ಕರೆಯಲಾಗಿದೆ. ಎಲ್ಲ ರಾಜ್ಯ ಭಾಷೆಗಳೂ ರಾಷ್ಟ್ರ ಭಾಷೆಗಳು’ ಎಂದರು.</p>.<p>‘ವಿಷಯಗಳ ಕಲಿಕೆಗೆ ಮಹತ್ವವಿರಬೇಕೇ ಹೊರತು ಭಾಷಾ ಕಲಿಕೆಗಲ್ಲ ಎಂಬ ತತ್ವ ಗಾಳಿಗೆ ತೂರಲಾಗಿದೆ. ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಯತ್ನಿಸಿದರೆ, ಅದು ಪ್ರತಿರೋಧ ಹೆಚ್ಚಿಸುತ್ತದೆ. ಹಿಂದಿ ಭಾಷೆಗೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಎದ್ದ ತೀವ್ರ ಆಕ್ರೋಶವೇ ನಿದರ್ಶನ’ ಎಂದರು.</p>.<p>ನಾಡೋಜ ಗೌರವಕ್ಕೆ ಪಾತ್ರರಾದ ಪ್ರೊ.ಸಿ.ಮಹಾದೇವಪ್ಪ ಮತ್ತು ಎಚ್.ಸಿ.ಸತ್ಯನ್ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಗೌರವ ಪ್ರದಾನ ಮಾಡಿದರು. ಗೌರವಕ್ಕೆ ಆಯ್ಕೆಯಾಗಿರುವ ಜಿ.ರಾಮಕೃಷ್ಣ ಅವರು ಗೈರಾದರು. </p>.<div><blockquote> ರಾಜ್ಯದ ವಿಶ್ವವಿದ್ಯಾಲಯಗಳು ಅದರಲ್ಲೂ ವಿಶೇಷ ವಿಶ್ವವಿದ್ಯಾಲಯಗಳ ಆರ್ಥಿಕ ಸಂಕಷ್ಟ ಬೋಧಕ ಸಿಬ್ಬಂದಿ ಕೊರತೆ ನಿವಾರಿಸಲು ಸಂಪುಟ ಉಪಸಮಿತಿಯಲ್ಲಿ ಆಳ ಅಧ್ಯಯನ ನಡೆಸಲಾಗುತ್ತಿದೆ </blockquote><span class="attribution">–ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ತಮಿಳುನಾಡು ಮತ್ತು ಕೇರಳ ಸರ್ಕಾರಗಳು ದ್ವಿಭಾಷಾ ನೀತಿಯನ್ನು ಅನುಸರಿಸಿದ ರೀತಿ ಕರ್ನಾಟಕ ಸರ್ಕಾರವೂ ದ್ವಿಭಾಷಾ ಸೂತ್ರವನ್ನು ಒಪ್ಪಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ನಿರಾಕರಿಸಬೇಕು’ ಎಂದು ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ಸಲಹೆ ನೀಡಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದಲ್ಲಿ ಘಟಿಕೋತ್ಸವಲ್ಲಿ ಮಾತನಾಡಿದ ಅವರು, ‘ಕುವೆಂಪು ಅವರು ಬಹುಹಿಂದೆಯೇ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬ ಸೂತ್ರ ಪ್ರತಿಪಾದಿಸಿದ್ದಾರೆ’ ಎಂದರು.</p>.<p>‘ಹಿಂದಿಯನ್ನು ರಾಷ್ಟ್ರ ಭಾಷೆ ಎಂಬಂತೆ ಬಿಂಬಿಸುತ್ತಿರುವುದು ಹಿಂದಿಯೇತರ ರಾಜ್ಯಗಳಿಗೆ ತೊಡಕಾಗಿದೆ. ವಾಸ್ತವವಾಗಿ ನಮ್ಮ ಸಂವಿಧಾನವು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂಬುದಾಗಿ ಘೋಷಿಸಿಲ್ಲ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಂಪರ್ಕ ಭಾಷೆಗಳೆಂದು ಕರೆಯಲಾಗಿದೆ. ಎಲ್ಲ ರಾಜ್ಯ ಭಾಷೆಗಳೂ ರಾಷ್ಟ್ರ ಭಾಷೆಗಳು’ ಎಂದರು.</p>.<p>‘ವಿಷಯಗಳ ಕಲಿಕೆಗೆ ಮಹತ್ವವಿರಬೇಕೇ ಹೊರತು ಭಾಷಾ ಕಲಿಕೆಗಲ್ಲ ಎಂಬ ತತ್ವ ಗಾಳಿಗೆ ತೂರಲಾಗಿದೆ. ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಯತ್ನಿಸಿದರೆ, ಅದು ಪ್ರತಿರೋಧ ಹೆಚ್ಚಿಸುತ್ತದೆ. ಹಿಂದಿ ಭಾಷೆಗೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಎದ್ದ ತೀವ್ರ ಆಕ್ರೋಶವೇ ನಿದರ್ಶನ’ ಎಂದರು.</p>.<p>ನಾಡೋಜ ಗೌರವಕ್ಕೆ ಪಾತ್ರರಾದ ಪ್ರೊ.ಸಿ.ಮಹಾದೇವಪ್ಪ ಮತ್ತು ಎಚ್.ಸಿ.ಸತ್ಯನ್ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಗೌರವ ಪ್ರದಾನ ಮಾಡಿದರು. ಗೌರವಕ್ಕೆ ಆಯ್ಕೆಯಾಗಿರುವ ಜಿ.ರಾಮಕೃಷ್ಣ ಅವರು ಗೈರಾದರು. </p>.<div><blockquote> ರಾಜ್ಯದ ವಿಶ್ವವಿದ್ಯಾಲಯಗಳು ಅದರಲ್ಲೂ ವಿಶೇಷ ವಿಶ್ವವಿದ್ಯಾಲಯಗಳ ಆರ್ಥಿಕ ಸಂಕಷ್ಟ ಬೋಧಕ ಸಿಬ್ಬಂದಿ ಕೊರತೆ ನಿವಾರಿಸಲು ಸಂಪುಟ ಉಪಸಮಿತಿಯಲ್ಲಿ ಆಳ ಅಧ್ಯಯನ ನಡೆಸಲಾಗುತ್ತಿದೆ </blockquote><span class="attribution">–ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>