‘ದೂರುದಾರ ಮಹಿಳೆಯು ಹಣದ ವಿಚಾರವಾಗಿ ಚಿಕ್ಕಪ್ಪನ ಮಗಳ ಜೊತೆ ಜಗಳವಾಡಿದ್ದಾರೆ. ಈ ಕುರಿತು ಸೆ. 18ರಂದು ಠಾಣೆಗೆ ದೂರು ಕೊಡಲು ಬಂದಿದ್ದರು. ಮಾರಪ್ಪ ದೂರು ಸ್ವೀಕರಿಸಿ, ‘ನಾಳೆ ಬನ್ನಿ ಎಲ್ಲರನ್ನೂ ಕರೆದು ವಿಚಾರಿಸುತ್ತೇನೆ’ ಎಂದು ಹೇಳಿ ಕಳಿಸಿದ್ದಾರೆ. ಸೆ. 21ರಂದು ಮಾರಪ್ಪ ಮಹಿಳೆಗೆ ಕರೆ ಮಾಡಿ, ಲೈಂಗಿಕ ಸಮ್ಮತಿಗೆ ಒತ್ತಾಯ ಮಾಡಿದ್ದಾರೆ. ಮಹಿಳೆ ದೂರು ಆಧರಿಸಿ ಮಾರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೇವೆಯಿಂದಲೂ ಅಮಾನತುಗೊಳಿಸಲಾಗಿದೆ’ ಎಂದು ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.