ಧಾರ್ಮಿಕ ವಿಧಿವಿಧಾನಗಳು ನೆರವೇರಿದ ಬಳಿಕ ಬಿಲ್ಲು ಏರಿದ ಗೊರವಯ್ಯ ಕಾರ್ಣಿಕ ನುಡಿದು ಕೆಳಕ್ಕೆ ಜಿಗಿದರು. ಸುತ್ತ ನೆರೆದಿದ್ದ ಗೊರವ ಸಮೂಹದವರು ಅವರನ್ನು ಕಂಬಳಿಯಲ್ಲಿ ಹಿಡಿದರು.
'ಪ್ರಸಕ್ತ ವರ್ಷದ ಸ್ವಾಮಿಯ ದೈವವಾಣಿಯಲ್ಲಿ ಶುಭ ಫಲ ಅಡಗಿದೆ. ಈ ವರ್ಷ ಮಳೆ, ಬೆಳೆ ಸಂಪಾಗಿ, ನಾಡು ಸಮೃದ್ಧಿಯಾಗಲಿದೆ' ಎಂದು ಭಕ್ತರು ಕಾರ್ಣಿಕ ಉಕ್ತಿಯನ್ನು ವಿಶ್ಲೇಷಿಸಿದರು.
ಡೆಂಕನಮರಡಿಯಲ್ಲಿ ನೆರೆದಿದ್ದ ಅಪಾರ ಭಕ್ತರು ಮೈಲಾರಲಿಂಗ ಸ್ವಾಮಿಯನ್ನು ಮನದಲ್ಲಿ ಧ್ಯಾನಿಸುತ್ತಾ ವಿವಿಧ ರೀತಿಯ ಹರಕೆ ತೀರಿಸಿದರು.