ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಲಾರಲಿಂಗೇಶ್ವರ ಕಾರ್ಣಿಕ ಮಹೋತ್ಸವ: ನಾಡಿಗೆ ಸುಭಿಕ್ಷವಾಗುವ ಭವಿಷ್ಯ ಕೇಳಿ ಸಂತಸ

Published 26 ಫೆಬ್ರುವರಿ 2024, 13:58 IST
Last Updated 26 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಮೈಲಾರ (ವಿಜಯನಗರ ಜಿಲ್ಲೆ): 'ಸಂಪಾಯಿತಲೇ ಪರಾಕ್' ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿ. ಇದನ್ನು ಕೇಳುತ್ತಲೇ ಭಕ್ತರು ಸಮಾಧಾನದ ನಿಟ್ಡಿಸಿರು ಬಿಟ್ಟರು.

ಹೂವಿನಹಡಗಲಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರ್ಣಿಕ ಮಹೋತ್ಸವ ಜರುಗಿತು.

ಸುಕ್ಷೇತ್ರ ಪರಂಪರೆಯಂತೆ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವರೂಢರಾಗಿ ಡೆಂಕನಮರಡಿಗೆ ಆಗಮಿಸಿ ಕಾರ್ಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು.

ವಿಜಯನಗರದ ಅರಸರು ಈ ಹಿಂದೆ ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವ ಪರಿವಾರ ಕಾರ್ಣಿಕದ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ಈ ವೇಳೆ 'ಏಳು ಕೋಟಿ ಏಳು ಕೋಟಿಗೂ.... ಚಹಾಂಗ ಬಲೋ' ಎಂಬ ಸ್ವಾಮಿಯ ಉದ್ಘೋಷ ಮುಗಿಲು ಮುಟ್ಟಿತು.

ಧಾರ್ಮಿಕ ವಿಧಿವಿಧಾನಗಳು ನೆರವೇರಿದ ಬಳಿಕ ಬಿಲ್ಲು ಏರಿದ ಗೊರವಯ್ಯ ಕಾರ್ಣಿಕ ನುಡಿದು ಕೆಳಕ್ಕೆ ಜಿಗಿದರು. ಸುತ್ತ ನೆರೆದಿದ್ದ ಗೊರವ ಸಮೂಹದವರು ಅವರನ್ನು ಕಂಬಳಿಯಲ್ಲಿ ಹಿಡಿದರು.

'ಪ್ರಸಕ್ತ ವರ್ಷದ ಸ್ವಾಮಿಯ ದೈವವಾಣಿಯಲ್ಲಿ ಶುಭ ಫಲ ಅಡಗಿದೆ. ಈ ವರ್ಷ ಮಳೆ, ಬೆಳೆ ಸಂಪಾಗಿ, ನಾಡು ಸಮೃದ್ಧಿಯಾಗಲಿದೆ' ಎಂದು ಭಕ್ತರು ಕಾರ್ಣಿಕ ಉಕ್ತಿಯನ್ನು ವಿಶ್ಲೇಷಿಸಿದರು.

ಡೆಂಕನಮರಡಿಯಲ್ಲಿ ನೆರೆದಿದ್ದ ಅಪಾರ ಭಕ್ತರು ಮೈಲಾರಲಿಂಗ ಸ್ವಾಮಿಯನ್ನು ಮನದಲ್ಲಿ ಧ್ಯಾನಿಸುತ್ತಾ ವಿವಿಧ ರೀತಿಯ ಹರಕೆ ತೀರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT