<p><strong>ಹಗರಿಬೊಮ್ಮನಹಳ್ಳಿ</strong>: ತಾಲ್ಲೂಕಿನ ಮಾಲವಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವಿದೇಶಿ ಡೆಮೊಸೆಲ್ ಕ್ರೇನ್ ಪಕ್ಷಿಗಳು (ಕ್ರೌಂಚ ಪಕ್ಷಿ) ‘ಸಮಾವೇಶ’ ನಡೆದಿದೆ. ಆಹಾರ ಅರಸಿ ಅಂದಾಜು ಎರಡು ಸಾವಿರ ಪಕ್ಷಿಗಳು ವಲಸೆ ಬಂದಿವೆ. ದಕ್ಷಿಣ ಭಾರತದಲ್ಲೇ ಮೊದಲಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಸೇರಿವೆ.</p>.<p>ಜಲಾಶಯದ ಜೌಗು ಪ್ರದೇಶ ಸದ್ಯ ಒಣಗುತ್ತಿದ್ದು, ಈ ಬಾನಾಡಿಗಳಿಗೆ ಆಹಾರದ ಬಟ್ಟಲಾಗಿ ಬದಲಾಗಿದೆ. ಕೃಷಿ ಭೂಮಿ, ಕೆರೆಕಟ್ಟೆಗಳ ಬಳಿಯೇ ಅವು ಹೆಚ್ಚು ಠಿಕಾಣಿ ಹೂಡುತ್ತವೆ. </p>.<p>ಆದರೆ, ನೀರಿನ ಗುಂಡಿಗಳ ಬಳಿ ಮೀನುಗಾರರು ಬಲೆ ಹಾಕಿರುವುದು ಮತ್ತು ಬೀದಿ ನಾಯಿಗಳ ಹಾವಳಿಯ ಕಾರಣದಿಂದ ಈ ಅಪರೂಪದ ಪಕ್ಷಿಗಳಿಗೆ ಅಪಾಯ ಎದುರಾಗಿದೆ.</p>.<p>‘ಮಂಗೋಲಿಯಾ ಮತ್ತು ಸೈಬೇರಿಯಾದಿಂದ ಹಿಮಾಲಯ ದಾಟಿ ಈ ಕ್ರೌಂಚ ಪಕ್ಷಿಗಳು ವಲಸೆ ಬರುತ್ತವೆ. ಚಳಿಗಾಲದಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪಕ್ಷಿಗಳು, 2020ರಲ್ಲಿ ಈ ಭಾಗದಲ್ಲಿ ತುಂಬಾ ಕಡಿಮೆ ಕಾಣಿಸಿದವು. ಸದ್ಯ ದೊಡ್ಡ ಸಂಖ್ಯೆಯಲ್ಲಿ ಬಂದಿವೆ. ಪ್ರೀತಿ ಮತ್ತು ದಾಂಪತ್ಯಕ್ಕೆ ಹೆಸರಾಗಿವೆ. ಅವುಗಳ ರಕ್ಷಣೆ ಹೊಣೆ ಎಲ್ಲರ ಮೇಲಿದೆ’ ಎಂದು ಪಕ್ಷಿ ತಜ್ಞ ವಿಜಯ್ ಇಟ್ಟಿಗಿ ಅವರು ತಿಳಿಸಿದರು.</p>.<p>‘ಸೂಕ್ಷ್ಮ ಸಂವೇದನೆಯುಳ್ಳ ಈ ಪಕ್ಷಿಗಳು ಆಹಾರ ಇರುವ ಪ್ರದೇಶದಲ್ಲಿ ಜನ, ಜಾನುವಾರು ಮತ್ತು ನಾಯಿ ಸೇರಿ ಯಾವುದೇ ಪ್ರಾಣಿ ಕಂಡು ಬಂದರೂ ನೆಲಕ್ಕೆ ಇಳಿಯುವುದಿಲ್ಲ. ಜಲಾಶಯದ ಬಳಿ ವಲಸೆ ಪಕ್ಷಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಕೆಲ ತಿಂಗಳಾದರೂ ಕಾವಲುಗಾರರ ನಿಯೋಜಿಸಬೇಕು’ ಎಂದು ಪಕ್ಷಿಪ್ರೇಮಿಗಳು ಕೋರಿದ್ದಾರೆ. </p>.<p>ಪ್ರೀತಿ ಮತ್ತು ದಾಂಪತ್ಯಕ್ಕೆ ಹೆಸರಾದ ಕ್ರೌಂಚ ಸೂಕ್ಷ್ಮ ಸಂವೇದನೆಯ ಸಂಕೋಚದ ಪಕ್ಷಿ ಮಂಗೋಲಿಯಾ, ಸೈಬೀರಿಯಾದಿಂದ ವಲಸೆ </p>.<div><blockquote>ಮಾಲವಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಅಪರೂಪದ ಪಕ್ಷಿಗಳು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಕಾವಲುಗಾರರನ್ನು ನಿಯೋಜಿಸಲು ಅಗತ್ಯ ಕ್ರಮ ಜರುಗಿಸಲಾಗುವುದು </blockquote><span class="attribution">ಆರ್. ಉಮೇಶ್ ವಲಯ ಅರಣ್ಯಾಧಿಕಾರಿ ಹೂವಿನಹಡಗಲಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ</strong>: ತಾಲ್ಲೂಕಿನ ಮಾಲವಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವಿದೇಶಿ ಡೆಮೊಸೆಲ್ ಕ್ರೇನ್ ಪಕ್ಷಿಗಳು (ಕ್ರೌಂಚ ಪಕ್ಷಿ) ‘ಸಮಾವೇಶ’ ನಡೆದಿದೆ. ಆಹಾರ ಅರಸಿ ಅಂದಾಜು ಎರಡು ಸಾವಿರ ಪಕ್ಷಿಗಳು ವಲಸೆ ಬಂದಿವೆ. ದಕ್ಷಿಣ ಭಾರತದಲ್ಲೇ ಮೊದಲಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಸೇರಿವೆ.</p>.<p>ಜಲಾಶಯದ ಜೌಗು ಪ್ರದೇಶ ಸದ್ಯ ಒಣಗುತ್ತಿದ್ದು, ಈ ಬಾನಾಡಿಗಳಿಗೆ ಆಹಾರದ ಬಟ್ಟಲಾಗಿ ಬದಲಾಗಿದೆ. ಕೃಷಿ ಭೂಮಿ, ಕೆರೆಕಟ್ಟೆಗಳ ಬಳಿಯೇ ಅವು ಹೆಚ್ಚು ಠಿಕಾಣಿ ಹೂಡುತ್ತವೆ. </p>.<p>ಆದರೆ, ನೀರಿನ ಗುಂಡಿಗಳ ಬಳಿ ಮೀನುಗಾರರು ಬಲೆ ಹಾಕಿರುವುದು ಮತ್ತು ಬೀದಿ ನಾಯಿಗಳ ಹಾವಳಿಯ ಕಾರಣದಿಂದ ಈ ಅಪರೂಪದ ಪಕ್ಷಿಗಳಿಗೆ ಅಪಾಯ ಎದುರಾಗಿದೆ.</p>.<p>‘ಮಂಗೋಲಿಯಾ ಮತ್ತು ಸೈಬೇರಿಯಾದಿಂದ ಹಿಮಾಲಯ ದಾಟಿ ಈ ಕ್ರೌಂಚ ಪಕ್ಷಿಗಳು ವಲಸೆ ಬರುತ್ತವೆ. ಚಳಿಗಾಲದಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪಕ್ಷಿಗಳು, 2020ರಲ್ಲಿ ಈ ಭಾಗದಲ್ಲಿ ತುಂಬಾ ಕಡಿಮೆ ಕಾಣಿಸಿದವು. ಸದ್ಯ ದೊಡ್ಡ ಸಂಖ್ಯೆಯಲ್ಲಿ ಬಂದಿವೆ. ಪ್ರೀತಿ ಮತ್ತು ದಾಂಪತ್ಯಕ್ಕೆ ಹೆಸರಾಗಿವೆ. ಅವುಗಳ ರಕ್ಷಣೆ ಹೊಣೆ ಎಲ್ಲರ ಮೇಲಿದೆ’ ಎಂದು ಪಕ್ಷಿ ತಜ್ಞ ವಿಜಯ್ ಇಟ್ಟಿಗಿ ಅವರು ತಿಳಿಸಿದರು.</p>.<p>‘ಸೂಕ್ಷ್ಮ ಸಂವೇದನೆಯುಳ್ಳ ಈ ಪಕ್ಷಿಗಳು ಆಹಾರ ಇರುವ ಪ್ರದೇಶದಲ್ಲಿ ಜನ, ಜಾನುವಾರು ಮತ್ತು ನಾಯಿ ಸೇರಿ ಯಾವುದೇ ಪ್ರಾಣಿ ಕಂಡು ಬಂದರೂ ನೆಲಕ್ಕೆ ಇಳಿಯುವುದಿಲ್ಲ. ಜಲಾಶಯದ ಬಳಿ ವಲಸೆ ಪಕ್ಷಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಕೆಲ ತಿಂಗಳಾದರೂ ಕಾವಲುಗಾರರ ನಿಯೋಜಿಸಬೇಕು’ ಎಂದು ಪಕ್ಷಿಪ್ರೇಮಿಗಳು ಕೋರಿದ್ದಾರೆ. </p>.<p>ಪ್ರೀತಿ ಮತ್ತು ದಾಂಪತ್ಯಕ್ಕೆ ಹೆಸರಾದ ಕ್ರೌಂಚ ಸೂಕ್ಷ್ಮ ಸಂವೇದನೆಯ ಸಂಕೋಚದ ಪಕ್ಷಿ ಮಂಗೋಲಿಯಾ, ಸೈಬೀರಿಯಾದಿಂದ ವಲಸೆ </p>.<div><blockquote>ಮಾಲವಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಅಪರೂಪದ ಪಕ್ಷಿಗಳು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಕಾವಲುಗಾರರನ್ನು ನಿಯೋಜಿಸಲು ಅಗತ್ಯ ಕ್ರಮ ಜರುಗಿಸಲಾಗುವುದು </blockquote><span class="attribution">ಆರ್. ಉಮೇಶ್ ವಲಯ ಅರಣ್ಯಾಧಿಕಾರಿ ಹೂವಿನಹಡಗಲಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>