ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಐಗಳ ಮಲ್ಲಾಪುರದಲ್ಲಿ ಸೋಮವಾರ ಮರಳು ದಿನ್ನೆ ಕುಸಿದು ಮಹಾಂತೇಶ (35) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಹಾಂತೇಶ ತನ್ನ ಎತ್ತಿನ ಗಾಡಿಯಲ್ಲಿ ಮರಳು ತುಂಬಿಕೊಂಡು ಬರಲು ಗ್ರಾಮದ ಹೊರವಲಯದಲ್ಲಿನ ಕೆರೆ ಬಳಿ ಹೋಗಿದ್ದರು. ಮರಳು ತುಂಬುವಾಗ ಮೇಲಿಂದ ಮರಳು ದಿನ್ನೆ ಮೇಲೆ ಕುಸಿದು ಬಿದ್ದಿದೆ. ಅದರಿಂದ ಹೊರಬರಲಾರದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.