<p><strong>ಹೊಸಪೇಟೆ</strong> (ವಿಜಯನಗರ): ‘ತಮಿಳುನಾಡು ಮತ್ತು ಕೇರಳ ಸರ್ಕಾರಗಳು ದ್ವಿಭಾಷಾ ನೀತಿಯನ್ನು ಅನುಸರಿಸಿದ ರೀತಿ ಕರ್ನಾಟಕ ಸರ್ಕಾರವೂ ದ್ವಿಭಾಷಾ ಸೂತ್ರವನ್ನು ಒಪ್ಪಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ನಿರಾಕರಿಸಬೇಕು’ ಎಂದು ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ಸಲಹೆ ನೀಡಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದಲ್ಲಿ ಘಟಿಕೋತ್ಸವಲ್ಲಿ ಮಾತನಾಡಿದ ಅವರು, ‘ಕುವೆಂಪು ಅವರು ಬಹುಹಿಂದೆಯೇ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬ ಸೂತ್ರ ಪ್ರತಿಪಾದಿಸಿದ್ದಾರೆ’ ಎಂದರು.</p>.<p>‘ಹಿಂದಿಯನ್ನು ರಾಷ್ಟ್ರ ಭಾಷೆ ಎಂಬಂತೆ ಬಿಂಬಿಸುತ್ತಿರುವುದು ಹಿಂದಿಯೇತರ ರಾಜ್ಯಗಳಿಗೆ ತೊಡಕಾಗಿದೆ. ವಾಸ್ತವವಾಗಿ ನಮ್ಮ ಸಂವಿಧಾನವು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂಬುದಾಗಿ ಘೋಷಿಸಿಲ್ಲ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಂಪರ್ಕ ಭಾಷೆಗಳೆಂದು ಕರೆಯಲಾಗಿದೆ. ಎಲ್ಲ ರಾಜ್ಯ ಭಾಷೆಗಳೂ ರಾಷ್ಟ್ರ ಭಾಷೆಗಳು’ ಎಂದರು.</p>.<p>‘ವಿಷಯಗಳ ಕಲಿಕೆಗೆ ಮಹತ್ವವಿರಬೇಕೇ ಹೊರತು ಭಾಷಾ ಕಲಿಕೆಗಲ್ಲ ಎಂಬ ತತ್ವ ಗಾಳಿಗೆ ತೂರಲಾಗಿದೆ. ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಯತ್ನಿಸಿದರೆ, ಅದು ಪ್ರತಿರೋಧ ಹೆಚ್ಚಿಸುತ್ತದೆ. ಹಿಂದಿ ಭಾಷೆಗೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಎದ್ದ ತೀವ್ರ ಆಕ್ರೋಶವೇ ನಿದರ್ಶನ’ ಎಂದರು.</p>.<p>ನಾಡೋಜ ಗೌರವಕ್ಕೆ ಪಾತ್ರರಾದ ಪ್ರೊ.ಸಿ.ಮಹಾದೇವಪ್ಪ ಮತ್ತು ಎಚ್.ಸಿ.ಸತ್ಯನ್ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಗೌರವ ಪ್ರದಾನ ಮಾಡಿದರು. ಗೌರವಕ್ಕೆ ಆಯ್ಕೆಯಾಗಿರುವ ಜಿ.ರಾಮಕೃಷ್ಣ ಅವರು ಗೈರಾದರು. </p>.<p><strong>ರಾಜ್ಯದ ವಿಶ್ವವಿದ್ಯಾಲಯಗಳು ಅದರಲ್ಲೂ ವಿಶೇಷ ವಿಶ್ವವಿದ್ಯಾಲಯಗಳ ಆರ್ಥಿಕ ಸಂಕಷ್ಟ ಬೋಧಕ ಸಿಬ್ಬಂದಿ ಕೊರತೆ ನಿವಾರಿಸಲು ಸಂಪುಟ ಉಪಸಮಿತಿಯಲ್ಲಿ ಆಳ ಅಧ್ಯಯನ ನಡೆಸಲಾಗುತ್ತಿದೆ </strong></p><p><strong>–ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ</strong></p>
<p><strong>ಹೊಸಪೇಟೆ</strong> (ವಿಜಯನಗರ): ‘ತಮಿಳುನಾಡು ಮತ್ತು ಕೇರಳ ಸರ್ಕಾರಗಳು ದ್ವಿಭಾಷಾ ನೀತಿಯನ್ನು ಅನುಸರಿಸಿದ ರೀತಿ ಕರ್ನಾಟಕ ಸರ್ಕಾರವೂ ದ್ವಿಭಾಷಾ ಸೂತ್ರವನ್ನು ಒಪ್ಪಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ನಿರಾಕರಿಸಬೇಕು’ ಎಂದು ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ಸಲಹೆ ನೀಡಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದಲ್ಲಿ ಘಟಿಕೋತ್ಸವಲ್ಲಿ ಮಾತನಾಡಿದ ಅವರು, ‘ಕುವೆಂಪು ಅವರು ಬಹುಹಿಂದೆಯೇ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬ ಸೂತ್ರ ಪ್ರತಿಪಾದಿಸಿದ್ದಾರೆ’ ಎಂದರು.</p>.<p>‘ಹಿಂದಿಯನ್ನು ರಾಷ್ಟ್ರ ಭಾಷೆ ಎಂಬಂತೆ ಬಿಂಬಿಸುತ್ತಿರುವುದು ಹಿಂದಿಯೇತರ ರಾಜ್ಯಗಳಿಗೆ ತೊಡಕಾಗಿದೆ. ವಾಸ್ತವವಾಗಿ ನಮ್ಮ ಸಂವಿಧಾನವು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂಬುದಾಗಿ ಘೋಷಿಸಿಲ್ಲ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಂಪರ್ಕ ಭಾಷೆಗಳೆಂದು ಕರೆಯಲಾಗಿದೆ. ಎಲ್ಲ ರಾಜ್ಯ ಭಾಷೆಗಳೂ ರಾಷ್ಟ್ರ ಭಾಷೆಗಳು’ ಎಂದರು.</p>.<p>‘ವಿಷಯಗಳ ಕಲಿಕೆಗೆ ಮಹತ್ವವಿರಬೇಕೇ ಹೊರತು ಭಾಷಾ ಕಲಿಕೆಗಲ್ಲ ಎಂಬ ತತ್ವ ಗಾಳಿಗೆ ತೂರಲಾಗಿದೆ. ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಯತ್ನಿಸಿದರೆ, ಅದು ಪ್ರತಿರೋಧ ಹೆಚ್ಚಿಸುತ್ತದೆ. ಹಿಂದಿ ಭಾಷೆಗೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಎದ್ದ ತೀವ್ರ ಆಕ್ರೋಶವೇ ನಿದರ್ಶನ’ ಎಂದರು.</p>.<p>ನಾಡೋಜ ಗೌರವಕ್ಕೆ ಪಾತ್ರರಾದ ಪ್ರೊ.ಸಿ.ಮಹಾದೇವಪ್ಪ ಮತ್ತು ಎಚ್.ಸಿ.ಸತ್ಯನ್ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಗೌರವ ಪ್ರದಾನ ಮಾಡಿದರು. ಗೌರವಕ್ಕೆ ಆಯ್ಕೆಯಾಗಿರುವ ಜಿ.ರಾಮಕೃಷ್ಣ ಅವರು ಗೈರಾದರು. </p>.<p><strong>ರಾಜ್ಯದ ವಿಶ್ವವಿದ್ಯಾಲಯಗಳು ಅದರಲ್ಲೂ ವಿಶೇಷ ವಿಶ್ವವಿದ್ಯಾಲಯಗಳ ಆರ್ಥಿಕ ಸಂಕಷ್ಟ ಬೋಧಕ ಸಿಬ್ಬಂದಿ ಕೊರತೆ ನಿವಾರಿಸಲು ಸಂಪುಟ ಉಪಸಮಿತಿಯಲ್ಲಿ ಆಳ ಅಧ್ಯಯನ ನಡೆಸಲಾಗುತ್ತಿದೆ </strong></p><p><strong>–ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ</strong></p>