ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ತೆಗೆಯುವ ಕೆಲಸ ಸ್ಥಗಿತ

ಹಂಪಿ ವಿರೂಪಾಕ್ಷ ದೇವಸ್ಥಾನದ ಕನಕಗಿರಿ ಮಂಟಪ
Published 22 ಫೆಬ್ರುವರಿ 2024, 16:21 IST
Last Updated 22 ಫೆಬ್ರುವರಿ 2024, 16:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ವಿರೂಪಾಕ್ಷ ದೇವಸ್ಥಾನ ಆವರಣದ ಕನಕಗಿರಿ ಮಂಟಪದ ಹಳೆಯ ಬಣ್ಣವನ್ನು ತೆಗೆದುಹಾಕಿ ಸ್ವಚ್ಛಗೊಳಿಸುವ ಕೆಲಸ ಗುರುವಾರ ಸ್ಥಗಿತಗೊಂಡಿದೆ.

ಫೆ.15ರಂದು ಈ ಕೆಲಸ ಆರಂಭಗೊಂಡಿತ್ತು. 200 ವರ್ಷಗಳಿಗೂ ಹಿಂದೆ ಸುಣ್ಣ ಮತ್ತು ಮಣ್ಣನ್ನು ಬಳಸಿ ಮಾಡಿದಂತಹ ಬಣ್ಣವನ್ನು ಕೆತ್ತಿ ತೆಗೆಯುವುದರಿಂದ ಹಾಗೂ ವಾಷ್‌ ಮಾಡುವುದರಿಂದ ಸ್ಮಾರಕದ ಮೂಲ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಇತಿಹಾಸ ತಜ್ಞರು ಆತಂಕ ವ್ಯಕ್ತಪಡಿಸಿದ್ದರು.

ಕೆಲಸ ಆರಂಭವಾದ ದಿನವೇ ‘ಪ್ರಜಾವಾಣಿ’ ಈ ಬಗ್ಗೆ ವರದಿ ಪ್ರಕಟಿಸಿತ್ತು. ಅಟ್ಟಳಿಗೆ ಕಟ್ಟಿ, ಆಗ ಒಂದು ಕಂಬವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿತ್ತು. ವರದಿ ಪ್ರಕಟವಾದ ಬಳಿಕ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ), ತಜ್ಞರನ್ನು ಸ್ಥಳಕ್ಕೆ ಕರೆಸಿತ್ತು. ಬುಧವಾರವೂ ರಾಸಾಯನಿಕ ತಜ್ಞರೊಬ್ಬರು ಸ್ಥಳಕ್ಕೆ ಭೇಟಿ ನೀಡಿದ್ದರು. ಬಣ್ಣವನ್ನು ಕಿತ್ತು ತೆಗೆಯುವುದು ಸೂಕ್ತವಲ್ಲ ಎಂಬ ಅವರ ಶಿಫಾರಸಿನಂತೆ ಕೆಲಸ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT