ಕೆಲಸ ಆರಂಭವಾದ ದಿನವೇ ‘ಪ್ರಜಾವಾಣಿ’ ಈ ಬಗ್ಗೆ ವರದಿ ಪ್ರಕಟಿಸಿತ್ತು. ಅಟ್ಟಳಿಗೆ ಕಟ್ಟಿ, ಆಗ ಒಂದು ಕಂಬವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿತ್ತು. ವರದಿ ಪ್ರಕಟವಾದ ಬಳಿಕ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ), ತಜ್ಞರನ್ನು ಸ್ಥಳಕ್ಕೆ ಕರೆಸಿತ್ತು. ಬುಧವಾರವೂ ರಾಸಾಯನಿಕ ತಜ್ಞರೊಬ್ಬರು ಸ್ಥಳಕ್ಕೆ ಭೇಟಿ ನೀಡಿದ್ದರು. ಬಣ್ಣವನ್ನು ಕಿತ್ತು ತೆಗೆಯುವುದು ಸೂಕ್ತವಲ್ಲ ಎಂಬ ಅವರ ಶಿಫಾರಸಿನಂತೆ ಕೆಲಸ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.