‘ಡಿಸೆಂಬರ್ ಕೊನೆ ವಾರದಲ್ಲೂ ಜೆಸ್ಕಾಂ ಇಂಥದ್ದೇ ನೋಟಿಸ್ ನೀಡಿತ್ತು. ಕುಲಸಚಿವರ ಕೈಗೆ ನೋಟಿಸ್ ತಲುಪಿದ ಮಾರನೇ ದಿನವೇ (ಡಿ.29) ಇಡೀ ದಿನ ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಫೆಬ್ರುವರಿಯಲ್ಲಿ ಅನುದಾನ ಬರುವ ನಿರೀಕ್ಷೆಯಿದ್ದು, ಘಟಿಕೋತ್ಸವವೂ ಇದೆ ಎಂದು ಹೇಳಿದ್ದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಆದರೆ, ಸರ್ಕಾರದಿಂದ ಇನ್ನೂ ಅನುದಾನ ಲಭ್ಯವಾಗಿಲ್ಲ. ಸರ್ಕಾರ ಮತ್ತು ಜೆಸ್ಕಾಂಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.