‘ತೆರೆಯದ ದಿನಸಿ ಮಳಿಗೆ; ಜನ ಪರದಾಟ’ ಶೀರ್ಷಿಕೆ ಅಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಪೊಲೀಸರು ಅನಗತ್ಯವಾಗಿ ಕಿರಿಕಿರಿ ನೀಡಿ, ದಂಡ ಹಾಕುತ್ತಿರುವುದರಿಂದ ಕೋವಿಡ್–19 ನಿಷೇಧಾಜ್ಞೆ ಮುಗಿಯುವವರೆಗೆ ಮಳಿಗೆ ಬಾಗಿಲು ತೆರೆಯದಿರಲು ಕಿರಾಣ ಮರ್ಚಂಟ್ ಅಸೋಸಿಯೇಷನ್ನವರು ನಿರ್ಧರಿಸಿ, ಮಂಗಳವಾರ ನಗರದಲ್ಲಿ ಅಂಗಡಿಗಳನ್ನು ತೆರೆದಿರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗಿತ್ತು.