<p><strong>ಹೊಸಪೇಟೆ (ವಿಜಯನಗರ)</strong>: ‘ಫೆ.28ರಿಂದ ಮಾರ್ಚ್ 17ರವರೆಗೆ ನಡೆಯುವ ಪಿಯು ಪರೀಕ್ಷೆಗೆ ಜಿಲ್ಲೆ ಸಜ್ಜಾಗಿದೆ. 23 ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ (ವೆಬ್ಕಾಸ್ಟಿಂಗ್) ಪರೀಕ್ಷೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.</p>.<p>ಗುರುವಾರ ತಮ್ಮ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳ ಅಧೀಕ್ಷಕರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ, ‘ಹೊಸಪೇಟೆಯಲ್ಲಿ 7, ಹರಪನಹಳ್ಳಿಯಲ್ಲಿ 5, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರುಗಳಲ್ಲಿ ತಲಾ 3 ಹಾಗೂ ಕೂಡ್ಲಿಗಿಯಲ್ಲಿ 2 ಪರೀಕ್ಷಾ ಕೇಂದ್ರಗಳಿವೆ’ ಎಂದರು.</p>.<p>‘ಒಟ್ಟು 14,801 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 12,378 ಹೊಸಬರು, 500 ಮಂದಿ ಖಾಸಗಿಯಾಗಿ ಪರೀಕ್ಷೆಗೆ ಕಟ್ಟಿದವರು, 1,905 ಮಂದಿ ಪುನರಾವರ್ತಿತರು ಹಾಗೂ 8 ಮಂದಿ ಫಲಿತಾಂಶ ಸುಧಾರಣೆಗೆ ಪುನಃ ಪರೀಕ್ಷೆಗೆ ಹಾಜರಾಗುವವರು. ಒಟ್ಟು ಅಭ್ಯರ್ಥಿಗಳಲ್ಲಿ 7,235 ಬಾಲಕಿಯರು ಹಾಗೂ 5,143 ಬಾಲಕರು’ ಎಂದು ಮಾಹಿತಿ ನೀಡಿದರು.</p>.<p>‘ಪರೀಕ್ಷೆ ಅವಧಿಗೆ ಸರಿಯಾಗಿ ಬಸ್ ಬಿಡಲು ಸೂಚಿಸಲಾಗಿದೆ. ಹಾಲ್ಟಿಕೆಟ್ ತೋರಿಸಿದರೆ ಉಚಿತವಾಗಿ ಪ್ರಯಾಣ ಮಾಡಬಹುದು. ಬುರ್ಖಾ ಧರಿಸಿದವರು ತಮ್ಮ ಮುಖವನ್ನು ತೋರಿಸಬೇಕು, ಪರಿಶೀಲನೆಗೆ ಮಹಿಳಾ ಸಿಬ್ಬಂದಿಯೇ ಇರುತ್ತಾರೆ’ ಎಂದರು.</p>.<p class="Subhead">ಸುಧಾರಣೆ ವಿಶ್ವಾಸ: ‘ಕಳೆದ ವರ್ಷ ಅವಿಭಜಿತ ಜಿಲ್ಲೆಯಲ್ಲಿ ಶೇ 67.4ರಷ್ಟು ಫಲಿತಾಂಶ ದಾಖಲಾಗಿತ್ತು. ರಾಜ್ಯದಲ್ಲಿ 27ನೇ ಸ್ಥಾನದಲ್ಲಿತ್ತು. ಈ ಬಾರಿ 15ನೇ ಸ್ಥಾನಕ್ಕೆ ಜಿಗಿಯುವ ವಿಶ್ವಾಸ ಇದೆ. ಎರಡು ಬಾರಿ ಪೂರ್ವತಯಾರಿ ಪರೀಕ್ಷೆ ನಡೆಸಲಾಗಿತ್ತು’ ಎಂದು ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಹೇಳಿದರು.</p>
<p><strong>ಹೊಸಪೇಟೆ (ವಿಜಯನಗರ)</strong>: ‘ಫೆ.28ರಿಂದ ಮಾರ್ಚ್ 17ರವರೆಗೆ ನಡೆಯುವ ಪಿಯು ಪರೀಕ್ಷೆಗೆ ಜಿಲ್ಲೆ ಸಜ್ಜಾಗಿದೆ. 23 ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ (ವೆಬ್ಕಾಸ್ಟಿಂಗ್) ಪರೀಕ್ಷೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.</p>.<p>ಗುರುವಾರ ತಮ್ಮ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳ ಅಧೀಕ್ಷಕರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ, ‘ಹೊಸಪೇಟೆಯಲ್ಲಿ 7, ಹರಪನಹಳ್ಳಿಯಲ್ಲಿ 5, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರುಗಳಲ್ಲಿ ತಲಾ 3 ಹಾಗೂ ಕೂಡ್ಲಿಗಿಯಲ್ಲಿ 2 ಪರೀಕ್ಷಾ ಕೇಂದ್ರಗಳಿವೆ’ ಎಂದರು.</p>.<p>‘ಒಟ್ಟು 14,801 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 12,378 ಹೊಸಬರು, 500 ಮಂದಿ ಖಾಸಗಿಯಾಗಿ ಪರೀಕ್ಷೆಗೆ ಕಟ್ಟಿದವರು, 1,905 ಮಂದಿ ಪುನರಾವರ್ತಿತರು ಹಾಗೂ 8 ಮಂದಿ ಫಲಿತಾಂಶ ಸುಧಾರಣೆಗೆ ಪುನಃ ಪರೀಕ್ಷೆಗೆ ಹಾಜರಾಗುವವರು. ಒಟ್ಟು ಅಭ್ಯರ್ಥಿಗಳಲ್ಲಿ 7,235 ಬಾಲಕಿಯರು ಹಾಗೂ 5,143 ಬಾಲಕರು’ ಎಂದು ಮಾಹಿತಿ ನೀಡಿದರು.</p>.<p>‘ಪರೀಕ್ಷೆ ಅವಧಿಗೆ ಸರಿಯಾಗಿ ಬಸ್ ಬಿಡಲು ಸೂಚಿಸಲಾಗಿದೆ. ಹಾಲ್ಟಿಕೆಟ್ ತೋರಿಸಿದರೆ ಉಚಿತವಾಗಿ ಪ್ರಯಾಣ ಮಾಡಬಹುದು. ಬುರ್ಖಾ ಧರಿಸಿದವರು ತಮ್ಮ ಮುಖವನ್ನು ತೋರಿಸಬೇಕು, ಪರಿಶೀಲನೆಗೆ ಮಹಿಳಾ ಸಿಬ್ಬಂದಿಯೇ ಇರುತ್ತಾರೆ’ ಎಂದರು.</p>.<p class="Subhead">ಸುಧಾರಣೆ ವಿಶ್ವಾಸ: ‘ಕಳೆದ ವರ್ಷ ಅವಿಭಜಿತ ಜಿಲ್ಲೆಯಲ್ಲಿ ಶೇ 67.4ರಷ್ಟು ಫಲಿತಾಂಶ ದಾಖಲಾಗಿತ್ತು. ರಾಜ್ಯದಲ್ಲಿ 27ನೇ ಸ್ಥಾನದಲ್ಲಿತ್ತು. ಈ ಬಾರಿ 15ನೇ ಸ್ಥಾನಕ್ಕೆ ಜಿಗಿಯುವ ವಿಶ್ವಾಸ ಇದೆ. ಎರಡು ಬಾರಿ ಪೂರ್ವತಯಾರಿ ಪರೀಕ್ಷೆ ನಡೆಸಲಾಗಿತ್ತು’ ಎಂದು ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಹೇಳಿದರು.</p>