<p><strong>ಹೊಸಪೇಟೆ (ವಿಜಯನಗರ): </strong>ಬಂಡಾಯ ಕವಿಯೆಂದೇ ಜನಜನಿತರಾದ ಸಿದ್ಧಲಿಂಗಯ್ಯನವರಿಗೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ (ಡಿ.ಜಿ. ಸಾಗರ ಬಣ) ಸೋಮವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಸಂಘಟನೆಯ ಮುಖಂಡರು ಸಿದ್ಧಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರೆ, ಕಲಾವಿದ ಯಲ್ಲಪ್ಪ ಭಂಡಾರದಾರ್ ಕ್ರಾಂತಿಗೀತೆಗಳನ್ನು ಹಾಡಿದರು.</p>.<p>‘ಕ್ರಾಂತಿಗೀತೆಗಳನ್ನು ರಚಿಸಿ ಆ ಮೂಲಕ ತಳಸಮುದಾಯದವರಲ್ಲಿ ಅಸ್ಮಿತೆಯ ಪ್ರಜ್ಞೆ ಮೂಡಿಸಿ, ಅವರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು ಸಿದ್ಧಲಿಂಗಯ್ಯನವರು. ಅವರ ಅಗಲಿಕೆಯಿಂದ ತಳಸಮುದಾಯದವರಿಗೆ ದೊಡ್ಡ ನಷ್ಟ ಉಂಟಾಗಿದೆ’ ಎಂದು ಮುಖಂಡರು ಸ್ಮರಿಸಿದರು.</p>.<p>ಸಮಿತಿಯ ಜಿಲ್ಲಾಧ್ಯಕ್ಷ ಕಾರಿಗನೂರು ಲಕ್ಷಣ, ಮುಖಂಡರಾದ ಎಚ್.ಹುಲುಗಪ್ಪ, ವೈ.ಗೋವಿಂದರಾಜ, ಎ.ಬಸವರಾಜ, ಸಿ.ವೀರಭದ್ರಪ್ಪ, ಹನುಮಂತಪ್ಪ, ಎಚ್.ಎಸ್.ವೆಂಕಪ್ಪ, ಗುಜ್ಜಲ ನಾಗರಾಜ್, ನಿಂಬಗಲ್ ರಾಮಕೃಷ್ಣ, ಎಸ್.ಬಿ.ರಘುನಂದನ, ಸೋಮಶೇಖರ್ ಬಣ್ಣದಮನೆ, ಪರಮೇಶ್ವರಪ್ಪ, ನಾಗೇಂದ್ರ, ಸಂತೋಷ, ಓಬಳೇಶ್ ವಿನಾಯಕ ಶೆಟ್ಟರ್, ಈಶ್ವರ ಇಸೋಪ್, ಮಂಜುನಾಥ್ ಯಾದವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>ಬಂಡಾಯ ಕವಿಯೆಂದೇ ಜನಜನಿತರಾದ ಸಿದ್ಧಲಿಂಗಯ್ಯನವರಿಗೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ (ಡಿ.ಜಿ. ಸಾಗರ ಬಣ) ಸೋಮವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಸಂಘಟನೆಯ ಮುಖಂಡರು ಸಿದ್ಧಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರೆ, ಕಲಾವಿದ ಯಲ್ಲಪ್ಪ ಭಂಡಾರದಾರ್ ಕ್ರಾಂತಿಗೀತೆಗಳನ್ನು ಹಾಡಿದರು.</p>.<p>‘ಕ್ರಾಂತಿಗೀತೆಗಳನ್ನು ರಚಿಸಿ ಆ ಮೂಲಕ ತಳಸಮುದಾಯದವರಲ್ಲಿ ಅಸ್ಮಿತೆಯ ಪ್ರಜ್ಞೆ ಮೂಡಿಸಿ, ಅವರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು ಸಿದ್ಧಲಿಂಗಯ್ಯನವರು. ಅವರ ಅಗಲಿಕೆಯಿಂದ ತಳಸಮುದಾಯದವರಿಗೆ ದೊಡ್ಡ ನಷ್ಟ ಉಂಟಾಗಿದೆ’ ಎಂದು ಮುಖಂಡರು ಸ್ಮರಿಸಿದರು.</p>.<p>ಸಮಿತಿಯ ಜಿಲ್ಲಾಧ್ಯಕ್ಷ ಕಾರಿಗನೂರು ಲಕ್ಷಣ, ಮುಖಂಡರಾದ ಎಚ್.ಹುಲುಗಪ್ಪ, ವೈ.ಗೋವಿಂದರಾಜ, ಎ.ಬಸವರಾಜ, ಸಿ.ವೀರಭದ್ರಪ್ಪ, ಹನುಮಂತಪ್ಪ, ಎಚ್.ಎಸ್.ವೆಂಕಪ್ಪ, ಗುಜ್ಜಲ ನಾಗರಾಜ್, ನಿಂಬಗಲ್ ರಾಮಕೃಷ್ಣ, ಎಸ್.ಬಿ.ರಘುನಂದನ, ಸೋಮಶೇಖರ್ ಬಣ್ಣದಮನೆ, ಪರಮೇಶ್ವರಪ್ಪ, ನಾಗೇಂದ್ರ, ಸಂತೋಷ, ಓಬಳೇಶ್ ವಿನಾಯಕ ಶೆಟ್ಟರ್, ಈಶ್ವರ ಇಸೋಪ್, ಮಂಜುನಾಥ್ ಯಾದವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>