‘ನಾನು ಎಡನೂ ಅಲ್ಲ, ಬಲನೂ ಅಲ್ಲ. ನಾನು ಮಧ್ಯಮ ಪಂಥದವನೂ. ನನಗೆ ಏನು ಸರಿ ಅನಿಸುತ್ತದೆ. ಯಾವುದೇ ಸತ್ಯವಿದೆಯೋ ಅದನ್ನಷ್ಟೇ ಪ್ರತಿಪಾದಿಸುತ್ತೇನೆ. ನಾನು ಬರೆಯಲು ಆರಂಭಿಸಿದಾಗ ಎಡಪಂಥೀಯರೊಂದಿಗೆ ಗುರುತಿಸಿಕೊಂಡಿದ್ದೆ. ದಲಿತ, ಬಂಡಾಯ ಸಾಹಿತಿಗಳೊಂದಿಗೆ ಒಡನಾಟ ಹೊಂದಿದ್ದೆ. ನನ್ನ ಕೆಲವು ಮಿತ್ರರು ಬಲಪಂಥೀಯರಿದ್ದಾರೆ. ಆದರೆ, ಅವರೆಲ್ಲರೂ ಸತ್ಯ ಮರೆಮಾಚಿ, ಅವರ ಸಿದ್ಧಾಂತ ಪ್ರತಿಪಾದಿಸುತ್ತಿದ್ದರಿಂದ ಅವರಿಂದ ಅಂತರ ಕಾಯ್ದುಕೊಂಡೇ’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.