‘ಕಮಲಾಪುರದ ಕೆರೆ ತಾಂಡಾದ ನಿವಾಸಿಗಳಾದ ಚಂದ್ರ ನಾಯ್ಕ, ಹನುಮ ನಾಯ್ಕ, ಲೋಕಾ ನಾಯ್ಕ, ಪಂಪಾ ನಾಯ್ಕ, ಸಣ್ಣ ನಾಯ್ಕ ಸೇರಿದಂತೆ ಎಂಟು ಜನರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಮಾಲೀಕರು ಮನೆಗೆ ಬೀಗ ಹಾಕಿ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಕಬ್ಬು ಕಟಾವಿಗೆ ತೆರಳಿದ್ದಾರೆ. ಈ ವಿಷಯ ಅರಿತು ಕಳ್ಳರು ಮನೆಗೆ ಹೊಕ್ಕಿ, ಅಲ್ಲಿದ್ದ ಅಲ್ಮೇರಾ, ಟ್ರಂಕ್ ಒಡೆದು ಅದರಲ್ಲಿದ್ದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ’ ಎಂದು ಕಮಲಾಪುರ ಠಾಣೆ ಪಿಎಸ್ಐ ಅರುಣ್ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.